ಇತ್ತೀಚೆಗೆ ಐರೋಪ್ಯ ಒಕ್ಕೂಟ ಅದ್ರಲ್ಲೂ ಪೋಲ್ಯಾಂಡ್ನಲ್ಲಿ ನಿರ್ಮಾಣವಾಗಿರುವ ನಿರಾಶ್ರಿತರ ಸಮಸ್ಯೆಯನ್ನ ಬಗೆಹರಿಸೋದಕ್ಕೆ ಐರೋಪ್ಯ ರಾಷ್ಟ್ರಗಳು ವಿಫಲವಾಗಿದೆ. ಪೋಲ್ಯಾಂಡ್ ಗಡಿಯಲ್ಲಿ ಈಗ ನಿರ್ಮಾಣವಾಗಿರುವ ಈ ಸಮಸ್ಯೆಯಿಂದ ಸಾವಿರಾರು ಮಹಿಳೆಯರು, ಮಕ್ಕಳು ಚಳಿಯಲ್ಲಿ ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೆಲಾರಸ್ ಹಾಗು ರಷ್ಯಾದ ಮೇಲೆ ಅನುಮಾನ ಮೂಡೋದಕ್ಕೆ ಶುರುವಾಗಿದೆ.. ಇದೇನ್ರಿ… ಪೋಲ್ಯಾಂಡ್ನಲ್ಲಿ ಸಮಸ್ಯೆಯಾದ್ರೆ ರಷ್ಯಾ, ಬೆಲರಾಸ್ ಮೇಲೆ ಯಾಕೆ ಅನುಮಾನ ಮೂಡುತ್ತೆ ಅಂತೀರಾ…..?
ಕಳೆದ ಕೆಲ ವರ್ಷಗಳ ಹಿಂದೆ ಭಾರತಕ್ಕೆ ವಲಸೆ ಬರೋದಕ್ಕೆ ಪ್ರಯತ್ನಿಸಿದ್ದ ರೋಹಿಂಗ್ಯ ಮುಸಲ್ಮಾನರಿಗೆ ಭಾರತ ಸರ್ಕಾರ ನಿರ್ಬಂಧ ಹೇರಿತ್ತು. ಈ ವೇಳೆ ಭಾರತ ಸರ್ಕಾರ ರೋಹಿಂಗ್ಯ ಮುಸಲ್ಮಾನರ ಬಗ್ಗೆ ಭಯೋತ್ಪಾದನೆಯ ಕಾರಣ ನೀಡಿ ಕೇಂದ್ರ ಸರ್ಕಾರ ಪ್ರವೇಶ ನಿಷೇಧಿಸಿತ್ತು. ಆಗ ಭಾರತ ಮಾನವ ಹಕ್ಕುಗಳನ್ನ ಉಲ್ಲಂಘಿಸ್ತಾ ಇದೆ, ಆ ಜನ್ರಿಗೆ ಭಾರತದಲ್ಲಿ ಉಳಿಯೋದಕ್ಕೆ ಅವಕಾಶ ಕೊಡ್ಬೇಕು ಅಂತ ಭಾರತಕ್ಕೆ ಬಿಟ್ಟಿ ಸಲಹೆ ನೀಡಿದ್ದ ಯುರೋಪ್ ಒಕ್ಕೂಟ ಇದೀಗ ತಾನೇ ಮಧ್ಯಪ್ರಾಚ್ಯದ ನಿರಾಶ್ರಿತರಿಗೆ ಪ್ರವೇಶವನ್ನ ನಿರ್ಬಂಧಿಸಿದೆ. ಈ ಮೂಲಕ ತಾನು ಹೇಳೋದು ಭಗವದ್ಗೀತೆ, ತಿನ್ನೋದು ಬದನೆಕಾಯಿಯನ್ನೇ ಅನ್ನೋದನ್ನ ಯುರೋಪ್ ಒಕ್ಕೂಟ ಸಾಬೀತುಪಡಿಸಿದೆ.. ಈ ಮಧ್ಯಪ್ರಾಚ್ಯ ನಿರಾಶ್ರಿತರ ಸಮಸ್ಯೆ ಯುರೋಪ್ ಒಕ್ಕೂಟದ ಎಲ್ಲಾ ದೇಶಗಳಿಗೆ ತಗುಲದೇ ಇದ್ರೂ ಯುರೋಪ್ನ ಪ್ರಮುಖ ರಾಷ್ಟ್ರಗಳಲ್ಲಿ ಒಂದಾದ ಪೋಲ್ಯಾಂಡ್ಗೆ ಇದರ ಬಿಸಿ ಸರಿಯಾಗಿಯೇ ತಾಗ್ತಾ ಇದೆ.
ಇಲ್ಲಿ ಪ್ರಮುಖವಾಗಿ ನಡೆದಿರೋ ಘಟನೆ ಏನು ಅಂದ್ರೆ, ಈಗ ಮಧ್ಯಪ್ರಾಚ್ಯದ ರಾಷ್ಟ್ರಗಳಾದ ಇರಾಕ್ ಸಿರಿಯ, ಲೆಬನಾನ್ ದೇಶಗಳಲ್ಲಿನ ಉಗ್ರರ ಸಮಸ್ಯೆ ಹಾಗು ಸಂಘರ್ಷದಿಂದ ರೋಸಿ ಹೋಗಿರುವ ಜನ ಅಲ್ಲಿಂದ ಬೇರೆ ರಾಷ್ಟ್ರಕ್ಕೆ ವಲಸೆ ಹೋಗೋದಕ್ಕೆ ನಿರ್ಧರಿಸಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ ಈ ಹಿಂದೆ ಅಫ್ಘಾನಿಸ್ತಾನವನ್ನ ತಾಲಿಬಾನಿಗಳು ಆಕ್ರಮಿಸಿಕೊಂಡಾಗ ಅಲ್ಲಿನ ನಿರಾಶ್ರಿತ ಅಫ್ಘನ್ನರು ನಾವು ಅಮೆರಿಕಗೆ ಹೋಗಲ್ಲ, ಬದಲಾಗಿ ಯುರೋಪ್ ರಾಷ್ಟ್ರಗಳಿಗೆ ಹೋಗಿ ಬದುಕು ಕಟ್ಟಿಕೊಳ್ತೀವಿ ಅನ್ನೋ ಮಾತನ್ನ ಆಡ್ತಾರೆ. ಆದ್ರೆ ಈ ಬಗ್ಗೆ ಎಚ್ಚೆತ್ತ ಯುರೋಪ್ ಯೂನಿಯನ್, ಅನುಮತಿ ಇಲ್ಲದೇ ಯಾವುದೇ ನಿರಾಶ್ರಿತರನ್ನ ತನ್ನ ಒಕ್ಕೂಟದೊಳಗೆ ಬಿಡೋದಿಲ್ಲ ಅನ್ನೋ ನಿರ್ಧಾರ ಕೈಗೊಂಡಿತ್ತು.. ಇದಕ್ಕೆ ಪ್ರಮುಖವಾದ ಕಾರಣವೇನಂದ್ರೆ ನಿರಾಶ್ರಿತರ ಸೋಗಿನಲ್ಲಿ ಕೆಲ ಭಯೋತ್ಪಾದಕರು ಯುರೋಪ್ ಒಕ್ಕೂಟದೊಳಕ್ಕೆ ಪ್ರವೇಶಿಸುವ ಭೀತಿ ಈ ಒಕ್ಕೂಟ ದೇಶಗಳದ್ದು..
ಸದ್ಯಕ್ಕೆ ಈ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಸಂಘರ್ಷ ತಾರಕಕ್ಕೇರಿದ್ದು ಆ ರಾಷ್ಟ್ರಗಳಿಂದ ವಲಸೆ ಹೋಗಿ ಬೇರೆ ದೇಶಗಳಲ್ಲಿ ಬದುಕು ಕಟ್ಟಿಕೊಳ್ಳೋದಕ್ಕೆ ಪ್ರಯತ್ನಿಸ್ತಿದ್ದಾರೆ. ಇವ್ರಲ್ಲಿ ಬಹುತೇಕರು ಯುರೋಪ್ಗೆ ಹೋಗೋದಕ್ಕೆ ಬಯಸ್ತಾರೆ. ಆದ್ರೆ ಯಾವ ದೇಶವೂ ಕೂಡ ಅನುಮತಿ ಇಲ್ಲದೆ ವಲಸೆ ಕೈಗೊಳ್ಳೋದಕ್ಕೆ ಅವಕಾಶವನ್ನ ಕೊಡೋದಿಲ್ಲ. ಹಾಗೇನೆ ಇವರಿಗೆ ವಲಸೆಗೆ ಅನುಮತಿಯನ್ನ ಕೊಡೋದಿಲ್ಲ. ಕಾರಣ ಭಯೋತ್ಪಾದನೆ ಪೀಡಿತ ರಾಷ್ಟ್ರಗಳಿಂದ ಬಂದವರು ಅನ್ನೋದು.. ಹೀಗಾಗಿ ಇವ್ರು ಇಂದಿಗೆ ಯುರೋಪಿಯನ್ ಯುನಿಯನ್ನ ಕಣ್ಣಿಗೆ ಗಡಿದಾಟಿ ವಾಮಮಾರ್ಗದ ಮೂಲಕ ಬಂದ ಅಕ್ರಮ ವಲಸಿಗರಾಗಿ ಕಾಣ್ತಾರೆ. ಇಷ್ಟು ದಿನಗಳ ಕಾಲ ಈ ನಿರಾಶ್ರಿತರು ಟರ್ಕಿಯ ಮೂಲಕ ಈ ಯುರೋಪ್ ರಾಷ್ಟ್ರಗಳಿಗೆ ವಲಸೆ ಹೋಗ್ತಾ ಇದ್ರು. ಆದ್ರೆ ಟರ್ಕಿ ಆ ಮಾರ್ಗವನ್ನ ಸಂಪೂರ್ಣವಾಗಿ ಬಂದ್ ಮಾಡಿತ್ತು ಬಳಿಕ ಮೆಡಿಟರೇನಿಯನ್ ಸಮುದ್ರ ಮಾರ್ಗದ ಮೂಲಕ ಬೋಟ್ಗಳನ್ನ ಬಳಸಿಕೊಂಡು ಪ್ರಯಾಣ ಮಾಡ್ತಾ ಇದ್ರು. ಆದ್ರೆ ಇದು ಅತ್ಯಂತ ಅಪಾಯಕಾರಿ ಪ್ರಯಾಣವಾಗಿತ್ತು. ಈ ಪ್ರಯಾಣದ ಮೂಲಕ ಅಲ್ಲಿರುವ ಬಹುತೇಕರು ಸಾವಿಗೀಡಾಗ್ತಾ ಇದ್ರು. ಇದ್ರಲ್ಲಿ ಬದುಕುಳಿದವರು ಮಾತ್ರ ಐರೋಪ್ಯ ದೇಶಗಳಲ್ಲಿ ಬದುಕು ಕಟ್ಟಿಕೊಳ್ಳೋದಕ್ಕೆ ಶುರು ಮಾಡಿದ್ರು..
ಹೀಗೆ ಅಕ್ರಮ ವಲಸಿಗರು ಹೆಚ್ಚಾಗ್ತಾ ಇರೋದನ್ನ ಗಮನಿಸಿದ ಹಾಗು ಆ ನಿರಾಶ್ರಿತರಿಂದ ಸಮಸ್ಯೆ ಎದುರಿಸಿದ ಐರೋಪ್ಯ ರಾಷ್ಟ್ರಗಳು ಈ ನಿರಾಶ್ರಿತರಿಗೆ ಬಾಗಿಲು ಬಂದ್ ಮಾಡಿದ್ವು.. ಇದೆಲ್ಲದರ ಪರಿಣಾಮ ಇದೀಗ ಈ ನಿರಾಶ್ರಿತರ ಸಮಸ್ಯೆ ಪೋಲ್ಯಾಂಡ್ ಹಾಗು ಬೆಲಾರಸ್ ಗಡಿಯಲ್ಲಿ ಶುರುವಾಗಿದೆ. ಆದ್ರೆ ಇದೇ ಎಲ್ಲರ ಆಚ್ಚರಿಗೆ ಕಾರಣವಾಗಿದೆ. ಯಾಕಂದ್ರೆ ಮಧ್ಯಪ್ರಾಚ್ಯದ ನಿರಾಶ್ರಿತರು ತಮ್ಮ ರಾಷ್ಟ್ರ ಇರಾಕ್ನಿಂದನೇ ಹೊರಡಬೇಕು ಅಂತ ನಿರ್ಧರಿಸಿ ಬೆಲಾರಸ್ ಹಾಗು ಪೋಲ್ಯಾಂಡ್ ಗಡಿಗೆ ತಲುಪಬೇಕು ಅಂದ್ರೆ ಮೊದಲು ಇರಾಕ್ನಿಂದ ಅರ್ಮೇನಿಯ, ಜಾರ್ಜಿಯಗಳನ್ನ ದಾಟಿಕೊಂಡು ಉಕ್ರೇನಿಯ ತಲುಪಿ ಅಲ್ಲಿಂದ ಬೆಲರಸ್ಗೆ ತಲುಪಬೇಕು. ತದನಂತರ ಪೋಲ್ಯಾಂಡ್ ಗಡಿಗೆ ಈ ನಿರಾಶ್ರಿತರು ತಲುಪಬೇಕು. ಆದ್ರೆ ಇದು ಅಷ್ಟು ಸುಲಭವಾಗಿ ನಡೆಯೋ ಕೆಲಸವಲ್ಲ.. ಹಾಗಾಗಿಯೇ ಇದ್ರ ಹಿಂದೆ ಬೆಲಾರಸ್ ಹಾಗು ರಷ್ಯಾ ಇದೆ ಅನ್ನೋ ಅನುಮಾನವನ್ನ ಐರೋಪ್ಯ ಒಕ್ಕೂಟಗಳು ವ್ಯಕ್ತಪಡಿಸ್ತಿವೆ.
ಹೌದು, ಬೆಲಾರಸ್ನ ಮೇಲೆ ಈ ಐರೋಪ್ಯ ಒಕ್ಕೂಟ ಆರೋಪ ಮಾಡ್ತಾ ಇರೋದಕ್ಕೂ ಕಾರಣವಿದೆ. ಇರಾಕ್ನ ಸಿರಿಯಾ, ಹಾಗು ಕುರ್ದುಸ್ ಪ್ರಾಂತ್ಯದ ಮೂಲಕ ಸಾಕಷ್ಟು ವಿಮಾನಗಳು ಬೆಲಾರಸ್ಗೆ ಓಡಾಡ್ತಾ ಇವೆ. ಇದೇ ವಿಮಾನದಲ್ಲಿ ಸುಲಭವಾಗಿ ಈ ನಿರಾಶ್ರಿತರು ವಾಯುಮಾರ್ಗದ ಮೂಲಕ ಬೆಲಾರಸ್ ತಲುಪ್ತಾ ಇದ್ದಾರೆ. ಹೀಗೆ ಬೆಲಾರಸ್ಗೆ ತಲುಪಿದ ನಿರಾಶ್ರಿತರನ್ನ ಬೆಲಾರಸ್ ಸರ್ಕಾರ ಪೋಲ್ಯಾಂಡ್, ಲ್ಯಾಟ್ವಯ, ಲಿಥುವೆನಿಯಾ ಗಡಿಯ ಬಳಿ ಬಿಡ್ತಾ ಇದೆ. ಹೀಗೆ ಇಲ್ಲಿ ತಲುಪಿದ ವಲಸಿಗರು ಈ ಗಡಿಗಳನ್ನ ದಾಟಿ ಯುರೋಪ್ ಸೇರುವ ಕನಸ್ಸನ್ನ ಕಾಣ್ತಾ ಇದ್ರು. ಆದ್ರೆ ಇದಕ್ಕೆ ಐರೋಪ್ಯ ಸೇನೆ ಅಡ್ಡಗಾಲು ಹಾಕಿದೆ. ಹೀಗಾಗಿ ಈ ನಿರಾಶ್ರಿತರಲ್ಲಿರುವ ಮಕ್ಕಳು, ಮಹಿಳೆಯರು ಸರಿಯಾದ ಆಹಾರವಿಲ್ಲದೆ ಚಳಿಯಲ್ಲಿ ನಡುಗುತ್ತ ಪೋಲ್ಯಾಂಡ್ ಗಡಿಯಲ್ಲಿ ದಿನ ದೂಡ್ತಿದ್ದಾರೆ.
ಇನ್ನು ಐರೋಪ್ಯ ಒಕ್ಕೂಟಗಳಿಗೆ ಬೆಲರಾಸ್ ಮೇಲೆ ಅನುಮಾನ ಬರೋದಕ್ಕೆ ಮತ್ತೊಂದು ಪ್ರಮುಖ ಕಾರಣ ಅಂದ್ರೆ, ಅದು ಅಲ್ಲಿನ ಅಧ್ಯಕ್ಷ ಅಲೆಕ್ಸಾಂಡರ್ ಲುಕಶೆಂಕೊ.. ಹೌದು ಈ ಲುಕಶೆಂಕೊನಾ ಸರ್ವಾಧಿಕಾರಿ ಧೋರಣೆ ಬಗ್ಗೆ ಈ ಹಿಂದಿನಿಂದಲೂ ಐರೋಪ್ಯ ಒಕ್ಕೂಟಗಳು ಧ್ವನಿ ಎತ್ತುತ್ತಾ ಇವೆ. ಈತನ ಆಡಳಿತವನ್ನ ಕೊನೆಗೊಳಿಸಿ ಬೆಲಾರಸ್ನಲ್ಲಿ ಪ್ರಜಾಪ್ರಭುತ್ವ ನೆಲೆಗೊಳ್ಳೋದಕ್ಕೆ ಒತ್ತಾಯ ಮಾಡ್ತಿವೆ. ಇದೇ ಕಾರಣಕ್ಕೆ ಈತ ಐರೋಪ್ಯ ಒಕ್ಕೂಟಗಳ ಮೇಲೆ ಸೇಡು ತೀರಿಸಿಕೊಳ್ಳೋದಕ್ಕೆ ನಿರಾಶ್ರಿತರನ್ನ ಪೋಲ್ಯಾಂಡ್ ಗಡಿಗೆ ತಂದು ಬಿಡ್ತಾ ಇದ್ದಾನೆ ಅನ್ನೊ ಆರೋಪಗಳು ಕೇಳಿ ಬರ್ತಿವೆ. ಇನ್ನು ರಷ್ಯಾದ ಹಲವು ಯೋಜನೆಗಳಿಗೆ ಐರೋಪ್ಯ ಒಕ್ಕೂಟ ನೋ ಎಂದಿದ್ದು, ಇದು ಅಲ್ಲಿನ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆಕ್ರೋಶಕ್ಕೆ ಕಾರಣವಾಗಿದೆ. ಪುಟಿನ್ ಕೂಡ ಬೆಲಾರಸ್ನ ಈ ಕುಕೃತ್ಯಕ್ಕೆ ಸಾಥ್ ನೀಡ್ತಾ ಇದ್ದಾರೆ ಅನ್ನೋ ಆರೋಪಗಳು ಕೇಳಿ ಬರ್ತಿವೆ..
ಸದ್ಯದ ಮಟ್ಟಿಗೆ ಐರೋಪ್ಯ ಒಕ್ಕೂಟದ ಈ ಬಿಕ್ಕಟ್ಟು ರಾಜಕೀಯವಾಗಿ ತೀವ್ರತೆಯನ್ನ ಪಡೆದುಕೊಳ್ತಾ ಇದೆ. ಆದ್ರೆ ಪೋಲ್ಯಾಂಡ್ ಗಡಿಯಲ್ಲಿರುವ ಈ ಮಧ್ಯಪ್ರಾಚ್ಯದ ನಿರಾಶ್ರಿತರು ಅಹಾರ, ಸೂರು ಇಲ್ದೆ ಕೊರೆಯುವ ಚಳಿಯಲ್ಲಿ ನಡುಗುತ್ತಾ ಸೈನಿಕರ ಬಂದೂಕನ್ನ ತಮ್ಮ ಮುಗ್ದ ನೋಟಗಳಿಂದ ನೋಡುತ್ತಾ ದಿನ ನೂಕುತ್ತಿರುವ ದೃಶ್ಯಗಳು ಮಾತ್ರ ಮನಕಲಕುವಂತಿವೆ.
1advocated
gay teens chat https://bjsgaychatroom.info/
athletic gay dating sites https://gaypridee.com/
gay chat avenue without registration https://gaytgpost.com/
gay dating in clarksville tn https://speedgaydate.com/
bowser slots mario party 2 https://freeonlneslotmachine.com/
online slots free https://candylandslotmachine.com/
high-roller-slots https://beat-slot-machines.com/
free slots download for pc https://download-slot-machines.com/
free slots 777 sizzling 7s https://411slotmachine.com/
common expansion slots https://www-slotmachines.com/
dissertation help in dubai https://dissertationwriting-service.com/
dissertation help service binding https://help-with-dissertations.com/
dissertation help derrida https://mydissertationwritinghelp.com/
masters dissertation writing services https://dissertations-writing.org/
phd dissertation https://helpon-doctoral-dissertations.net/
zithromax for kids
zithromax ear infections