ಬೆಂಗಳೂರು: ಕರ್ನಾಟಕದ 14 ಜಿಲ್ಲೆಗಳನ್ನು ಗ್ರೀನ್ ಝೋನ್ಗಳೆಂದು ಸರ್ಕಾರ ಆದೇಶಿಸಿದ್ದು, ಕಳೆದ 28 ದಿನಗಳಿಂದ ಯಾವುದೇ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿಲ್ಲ. ಹಾಗಾಗಿ ಇದೀಗ ರಾಜ್ಯ ಸರ್ಕಾರ ಗ್ರೀನ್ ಝೋನ್ಗಳಿಗೆ ರಿಲೀಫ್ ನೀಡಿದೆ. ಈ ಮೂಲಕ ಅರ್ಧಕ್ಕರ್ಧ ಕರ್ನಾಟಕವೇ ಅನ್ಲಾಕ್ ಆದಂತಾಗಿದೆ.
ಗ್ರೀನ್ ಝೋನ್ನಲ್ಲಿರುವ ಯಾದಗಿರಿ, ರಾಯಚೂರು, ಕೊಪ್ಪಳ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ರಾಮನಗರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಸಡಿಲಿಕೆಯನ್ನು ನೀಡಲಾಗಿದೆ. ಹಾಗಾಗಿ ಗ್ರೀನ್ ಝೋನ್ಗಳಲ್ಲಿ ಏನಿರುತ್ತೆ? ಏನಿರಲ್ಲ?
- ಗ್ರೀನ್ ಝೋನ್ ಜಿಲ್ಲೆಗಳಲ್ಲಿ ಕೈಗಾರಿಕೆ, ಅಂಗಡಿ, ಮುಂಗಟ್ಟು ತೆರೆಯಲು ಅನುಮತಿ
- ಗ್ರಾಮೀಣ ಕೈಗಾರಿಕೆಗಳಿಗೆ ಗ್ರೀನ್ ಝೋನ್ನಲ್ಲಿ ಅವಕಾಶ
- ಉತ್ಪಾದನೆ, ರಫ್ತು ಮಾಡುವ ಕಾರ್ಖಾನೆಗಳಿಗೆ ಅವಕಾಶ
- ಕೈಗಾರಿಕಾ ಪ್ರದೇಶಗಳು, SEZ ಗಳಿಗೆ ಅವಕಾಶ
- ಸಿಂಗಲ್ ಬ್ರ್ಯಾಂಡ್, ಮಲ್ಟಿ ಬ್ರ್ಯಾಂಡ್ ಮಾಲ್ಗಳನ್ನು ಹೊರತುಪಡಿಸಿ ಕಾಂಪ್ಲೆಕ್ಸ್ಗಳನ್ನು ತೆರೆಯಲು ಅವಕಾಶ
- ಶೇ.50 ರಷ್ಟು ಉದ್ಯೋಗಿಗಳಿಗೆ ಕೆಲಸ ಮಾಡಲು ಮಾತ್ರ ಅನುಮತಿಯನ್ನು ನೀಡಲಾಗಿದೆ.
- ಸಾರ್ವಜನಿಕ ಸಾರಿಗೆಗೆ ವಿನಾಯಿತಿ ನೀಡದ ಸರ್ಕಾರ
- ರಾಮನಗರದಲ್ಲಿ ಕೈಗಾರಿಕೆ ತೆರೆಯಲು ಅವಕಾಶವಿಲ್ಲ
zithromax 250mg tablets
zithromax pneumonia