ನವದೆಹಲಿ: ಮಹಾಮಾರಿ ಕೊರೋನಾ ಹಾವಳಿ ಹೆಚ್ಚುತ್ತಿದ್ದು, ಅದಕ್ಕೆ ಅನೇಕ ಅಧಿಕಾರಿಗಳು ತುತ್ತಾಗುತ್ತಿದ್ದಾರೆ. ಹಾಗಾಗಿ ಕೊರೋನಾ ಹರಡುವ ಭಯಕ್ಕೆ ದೆಹಲಿಯಲ್ಲಿ ಐಆರ್ಎಸ್ ಅಧಿಕಾರಿ ಶಿವರಾಜ್ ಸಿಂಗ್ ತನ್ನ ಕಾರಿನಲ್ಲಿ ಆ್ಯಸಿಡ್ ರೀತಿಯ ದ್ರವ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ದೆಹಲಿಯ ಆರ್.ಕೆ ಪುರಂನಲ್ಲಿ ಆದಾಯ ತೆರಿಗೆ ಹೆಚ್ಚುವರಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ 56 ವರ್ಷದ ಶಿವರಾಜ್ ಸಿಂಗ್ ಕೊರೋನಾ ಹರಡಿರುವ ಶಂಕೆಯಿಂದ ಕೊರೋನಾ ಟೆಸ್ಟ್ ಮಾಡಿಸಿದ್ದರು. ರಿಪೋರ್ಟ್ನಲ್ಲಿ ನೆಗೆಟಿವ್ ಬಂದಿರುತ್ತದೆ. ಹಾಗಿದ್ದರೂ ಕೊರೋನಾ ಭಯದಿಂದ ಕುಟುಂಬಸ್ಥರಿಗೆ ಯಾವುದೇ ಸಮಸ್ಯೆಯಾಗಬಾರದೆಂದು ಮಾಡಿಕೊಂಡಿದ್ದು, ಡೆತ್ನೋಟ್ನಲ್ಲಿ ಅದನ್ನು ಬರೆದಿಟ್ಟಿದ್ದಾರೆ. ಸದ್ಯ ಪೊಲೀಸರು ಸಾವಿನ ಕುರಿತು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ.