ಇಂದಿರಾ ಕ್ಯಾಂಟೀನ್ ಪ್ರಾಜೆಕ್ಟ್ ಎದುರಾಗಿದ್ದ ವಿಘ್ನ ದೂರವಾಗಿದೆ. ಅನುಮಾನವಿಲ್ಲದೆ ಇಂದಿರಾ ಕ್ಯಾಂಟೀನ್ ಆಹಾರ ಸೇವಿಸಬಹುದು ಎಂದು ಸರ್ಕಾರದ FSSAI ಏಜೆನ್ಸಿ ಖಚಿತ ಪಡಿಸಿದೆ.
ಇತ್ತೀಚೆಗೆ ಕಾರ್ಪೊರೇಟರ್ ಉಮೇಶ್ ಶೆಟ್ಟಿ ಇಂದಿರಾ ಕ್ಯಾಂಟೀನ್ನ ಆಹಾರ ಸ್ಲೋ ಪಾಯ್ಸನ್ ಇದ್ದಹಾಗೆ ಎಂದು ಆರೋಪಿಸಿದ್ದರು. ಆರೋಪದಿಂದ ಜನರು ಇಂದಿರಾ ಕ್ಯಾಂಟೀನ್ನಲ್ಲಿ ಊಟ ಮಾಡಬೇಕೋ ಬೇಡವೋ ಎಂದು ಚಿಂತಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ಆಹಾರದ ಗುಣಮಟ್ಟವನ್ನು ಪರೀಕ್ಷಿಸಲು ಸರ್ಕಾರದ FSSAI ಏಜೆನ್ಸಿಗೆ ಕಳುಹಿಸಲಾಗಿತ್ತು. ಇದೀಗ ಏಜೆನ್ಸಿಯಿಂದ ವರದಿ ಬಂದಿದ್ದು ಇಂದಿರಾ ಕ್ಯಾಂಟೀನ್ ನ ಆಹಾರ ಸೇಫ್ ಆಗಿದೆ ಎಂದು ತಿಳಿದು ಬಂದಿದೆ.
ಇಂದಿನ ಕೌನ್ಸಿಲ್ ಮೀಟಿಂಗ್ನಲ್ಲಿ ವರದಿ ಮಂಡಿಸಲಿರುವ ಮೈತ್ರಿ ಆಡಳಿತ ಸುಳ್ಳು ಆಪಾದನೆ ಮಾಡಿದ್ದ ಉಮೇಶ್ ಶೆಟ್ಟಿ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಿದೆ.