ವಿಶಾಖಪಟ್ಟಣ : ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಭರ್ಜರಿ ಸೆಂಚುರಿ, ಯುವ ಆಟಗಾರರಾದ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅಬ್ಬರದಿಂದ ಟೀಮ್ ಇಂಡಿಯಾ ಪ್ರವಾಸಿ ವೆಸ್ಟ್ ಇಂಡೀಸ್ಗೆ 388ರನ್ಗಳ ಬೃಹತ್ ಗುರಿ ನೀಡಿದೆ.
ಎರಡನೇ ಒಡಿಐನಲ್ಲಿ ಟಾಸ್ ಗೆದ್ದು ಭಾರತವನ್ನು ಮೊದಲು ಬ್ಯಾಟಿಂಗ್ಗೆ ಇಳಿಸಿದ ವೆಸ್ಟ್ ಇಂಡೀಸ್ ಶರ್ಮಾ ಮತ್ತು ರಾಹುಲ್ ಆರ್ಭಟಕ್ಕೆ ನಲುಗಿತು. ರೋಹಿತ್ ಶರ್ಮಾ (159) 28ನೇ ಒಡಿಐ ಸೆಂಚುರಿ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ 3ನೇ ಒಡಿಐ ಸೆಂಚುರಿ ಬಾರಿಸಿದ್ರು. ರೋಹಿತ್ , ರಾಹುಲ್ ಜೊತೆಯಾಟವನ್ನು ಬೇರ್ಪಡಿಸಲು ಕೆರಬಿಯನ್ನರು ಪರದಾಡಿದರು. ತಂಡದ ಮೊತ್ತ 227ರನ್ ಆಗಿದ್ದಾಗ ಮೊದಲ ವಿಕೆಟ್ ರೂಪದಲ್ಲಿ ರಾಹುಲ್ ಔಟಾದರು.
ಒನ್ಡೌನ್ ಬಂದ ಕ್ಯಾಪ್ಟನ್ ಕೊಹ್ಲಿ ತಾವು ಎದುರಿಸಿದ ಮೊದಲ ಬಾಲ್ನಲ್ಲೇ ಶೂನ್ಯ ಸಂಪಾದನೆಯೊಂದಿಗೆ ಪೆವಿಲಿಯನ್ ಸೇರಿದರು. ರೋಹಿತ್ ಶರ್ಮಾ ತಂಡದ ಮೊತ್ತ 292ರನ್ ಆಗಿದ್ದಾಗ ಔಟಾದ್ರು. ನಂತರ ಶುರುವಾಗಿದ್ದೇ ಯುವ ಆಟಗಾರರ ಬ್ಯಾಟಿಂಗ್ ವೈಭವ!
ಪಂತ್ – ಅಯ್ಯರ್ ಅಬ್ಬರ : ರೋಹಿತ್ ಔಟಾದ ಬಳಿಕ ಅಂತಿಮ ಓವರ್ ಗಳಲ್ಲಿ ಯುವ ಆಟಗಾರರಾದ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅಬ್ಬರಿಸಿದರು. ಕಳೆದ ಮ್ಯಾಚಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದ ರಿಷಭ್ ಇಂದು ಕೇವಲ 16 ಬಾಲ್ಗಳಲ್ಲಿ 39ರನ್ ಬಾರಿಸಿ ತನ್ನ ವಿರುದ್ಧ ಕೇಳಿ ಬರುತ್ತಿದ್ದ ಟೀಕೆಗಳಿಗೆ ಉತ್ತರಿಸಿದರು. ಶ್ರೇಯಸ್ ಅಯ್ಯರ್ 32 ಬಾಲ್ಗಳಲ್ಲಿ 53ರನ್ ಸಿಡಿಸಿ ಮಿಂಚಿದರು. ಕೊನೆಯಲ್ಲಿ ಕೇದರ್ ಜಾದವ್ 10 ಬಾಲ್ಗಳಲ್ಲಿ 16ರನ್ ಮಾಡಿ ಬೃಹತ್ ಮೊತ್ತಕ್ಕೆ ನೆರವಾದರು.