ಹುಬ್ಬಳ್ಳಿ : ಸಿಡಿಲು ಬಡಿದು ಮೃತರಾದ ಸೋಮವ್ವ ಕೋಂ ಸೋಮಪ್ಪ ಗಿಡ ಬಸಪ್ಪನವರ(48) ಕುಟುಂಬದವರಿಗೆ ಜಿಲ್ಲಾ ತತ್ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ 5 ಲಕ್ಷ ಪರಿಹಾರದ ಚಕ್ ವಿತರಿಸಿದರು. ಮೃತರ ಮಗ ಮಂಜುನಾಥ ಸೋಮಪ್ಪ ಚಕ್ ಪಡೆದುಕೊಂಡರು.
ಈ ಸಂದರ್ಭದಲ್ಲಿ ಶಾಸಕಿ ಕುಸುಮಾವತಿ ಶಿವಳ್ಳಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕುಂದಗೋಳ ತಾಲ್ಲೂಕಿನ ನೆಲಗುಡ್ಡ ಗ್ರಾಮದ ಸೋಮವ್ವ ಜುಲೈ 7 ರಂದು ಜಮೀನಿನಲ್ಲಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದರು.