ದಾವಣಗೆರೆ: ಸಿಡಿಲು ಬಡಿದು ಸ್ಥಳದಲ್ಲೇ 10 ಕುರಿಗಳು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ನಡೆದಿದೆ.ರಾತ್ರಿಯಿಡಿ ಮಳೆ ಸುರಿದಿದ್ದರಿಂದ ಕುರಿಗಾಯಿಗಳು ಆಶ್ರಯವಿಲ್ಲದೇ ಅಸ್ತವ್ಯಸ್ಥಗೊಂಡಿದ್ದಾರೆ.ವಿಷಯ ತಿಳಿಯುತ್ತಿದ್ದಂತೆ ಕುರಿಗಾಯಿಗಳ ನೆರವಿಗೆ ನಿಂತ ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮಿಜಿಯವರು, ಬೆಳ್ಳೂಡಿ ಕನಕ ಮಠದಲ್ಲಿ ಕುರಿಗಾಯಿಗಳಿಗೆ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಬಳಿಕ ಕುರಿಗಾಯಿಗಳು ಇದ್ದ ಸ್ಥಳಕ್ಕೆ ಭೇಟಿ ನೀಡಿ, ತಹಶೀಲ್ದಾರ್ ಅವರಿಗೆ ಸರ್ಕಾರದಿಂದ ಪರಿಹಾರ ನೀಡುವಂತೆ ಒತ್ತಾಯಪಡಿಸಿದ್ದಾರೆ.