ಲಖ್ನೋ : ದೇಶಾದ್ಯಂತ ಪೌರತ್ವದ ಜ್ವಾಲೆ ಹಬ್ಬುತ್ತಿದ್ದು, ಉತ್ತರ ಪ್ರದೇಶದಲ್ಲೂ ಪ್ರತಿಭಟನೆಯ ಕಾವು ಜೋರಾಗಿದೆ. ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 11ಕ್ಕೇರಿದ್ದು, ಗಲಭೆಯಲ್ಲಿ 50ಕ್ಕೂ ಹೆಚ್ಚು ಸಾರ್ವಜನಿಕರು ಗಾಯಗೊಂಡಿದ್ದಾರೆ.
ಫೀರೋಜಾಬಾದ್, ಕಾನ್ಪುರ್, ಬಿಜ್ನೋರ್, ಸಂಬಾಲ್ ಮತ್ತು ಮೀರತ್ನಲ್ಲಿ ಒಟ್ಟು 11 ಮಂದಿ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ. ಬರೇಲಿ, ವಾರಣಾಸಿ, ಭದೋಹಿ, ಗೋರಖ್ಪುರ, ಸಂಬಾಲ್ ಮುಂತಾದ ಕಡೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಕಲಹಗಳು ನಡೆದಿವೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಯಾರು ಕಾನೂನನ್ನು ಕೈಗೆತ್ತಿಗೊಳ್ಳದೆ ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ.