ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್ಎಫ್ಒ ಹಾಗೂ ಡಿಆರ್ಎಫ್ಓ ಮೇಲೆ ಲಾಕ್ಡೌನ್ ನಿಯಮ ಉಲ್ಲಂಘನೆ ಆರೋಪದ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಚಿಕ್ಕಮಗಳೂರಿನ ಆಲ್ಡೂರು ಪೋಲಿಸ್ ಠಾಣೆಯಲ್ಲಿ, ವಲಯ ಅರಣ್ಯಧಿಕಾರಿ ಎಲ್. ಸ್ವಾತಿ ಹಾಗೂ ಉಪ ವಲಯ ಅರಣ್ಯಾಧಿಕಾರಿ ಪ್ರದೀಪ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಜೂನ್ 6 ರಂದು ಚಿಕ್ಕಮಗಳೂರಿನ ಹೊರವಲಯದ ವಸ್ತಾರೆ ಬಳಿ ಇವರು ವಾಹನದಲ್ಲಿ ಹೋಗುವಾಗ ಅಡ್ಡಾದಿಡ್ಡಿ ವಾಹನ ಚಲಾಯಿಸುವುದು ಕಂಡು ಬಂದಿದೆ. ಈ ಕುರಿತು ಪೋಲಿಸರು ಚಾಲಕನಿಗೆ ವಾಹನ ನಿಲ್ಲಿಸುವಂತೆ ಹೇಳಿದರೂ ವಾಹನ ನಿಲ್ಲಿಸಿಲ್ಲ.
ಲಾಕ್ಡೌನ್ ನಿಯಮಾನುಸಾರ ರಾತ್ರಿ 9 ರಿಂದ ಬೆಳಗ್ಗೆ 5 ರವರೆಗೂ ಅಗತ್ಯ ಸಂಚಾರಕ್ಕೆ ನಿರ್ಬಂಧವಿದೆ. ವಾಹನವನ್ನು ನಿಲ್ಲಿಸಿ ಅನುಮತಿ ಪತ್ರ ತೋರಿಸಿ ಎಂದೂ ಪೋಲಿಸರು ಕೇಳಿದರೂ ಉಡಾಫೆ ಉತ್ತರ ನೀಡಿದ್ದು, ಈ ಇಬ್ಬರೂ ಅಧಿಕಾರಿಗಳು ಮಾಸ್ಕ್ ಕೂಡ ಧರಿಸಿರಲಿಲ್ಲ. ವಾಹನ ಚಾಲನೆ ಮಾಡುತ್ತಿದ್ದ ಚಾಲಕ ಮಧ್ಯಪಾನ ಮಾಡಿದ್ದ, ಎಂದೂ ಮೂಲಗಳು ತಿಳಿಸಿದ್ದು, ಈ ಹಿನ್ನಲೆ ಆರ್ಎಫ್ಒ ಸ್ವಾತಿ ಹಾಗೂ ಡಿಆರ್ಎಫ್ಓ ಪ್ರದೀಪ್ ಮೇಲೆ ಆಲ್ಡೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.