‘ಜನತಾ ಚಪ್ಪಾಳೆ’ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಾಡಿರೋ ಟ್ವೀಟ್ಗೆ ನಟ ‘ಮೈನಾ’ ಚೇತನ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆ ಟ್ವೀಟ್, ರೀ ಟ್ವೀಟ್ಗಳು ತುಂಬಾ ಸದ್ದು ಮಾಡ್ತಾ ಇವೆ.
ಕೊರೋನಾ ನಿಯಂತ್ರಣದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿದ್ರು. ಅಲ್ಲದೆ ವೈದ್ಯರು, ದಾದಿಯರು ಸೇರಿದಂತೆ ಸೇವೆ ಸಲ್ಲಿಸುತ್ತಿರೋರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಜನತಾ ಕರ್ಫ್ಯೂ ದಿನವಾದ ನಿನ್ನೆ ಸಂಜೆ 5 ಗಂಟೆಗೆ ಎಲ್ರೂ ಕೂಡ ಅವರವರ ಮನೆ ಮುಂದೆ, ಟೆರಸ್ ಮೇಲೆ ನಿಂತು ಚಪ್ಪಾಳೆ ಹೊಡೆದು ಗೌರವ ಸಲ್ಲಿಸಲು ಮೋದಿ ಕರೆ ಕೊಟ್ಟಿದ್ರು. ಮೋದಿ ಕರೆಗೆ ದೇಶ ವ್ಯಾಪಿ ಬೆಂಬಲ ವ್ಯಕ್ತವಾಗಿತ್ತು.
ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮೋದಿ ಕರೆಗೆ ಸ್ಪಂದಿಸುವಂತೆ ಅಭಿಮಾನಿಗಳಿಗೆ ಕೇಳಿಕೊಂಡಿದ್ರು. ಪ್ರಧಾನಿ ಮೋದಿ ನಿಮ್ಮ ಮೂಲಕ ಎನರ್ಜಿ ಮೆಡಿಸನ್ ಸೃಷ್ಟಿಸ್ತಿದ್ದಾರೆ. ನಿಮ್ಮ ಮನೆ ಮುಂದೆ ಅಥವಾ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟುವಂತೆ ಮಹಿಳೆಯೊಬ್ರು ಹೇಳಿರೋ ವಿಡಿಯೋವನ್ನು ಸುದೀಪ್ ಶೇರ್ ಮಾಡಿದ್ರು. ಅಲ್ಲದೆ ” ದಯವಿಟ್ಟು ಇದ್ರಲ್ಲಿ ಭಾಗವಹಿಸಿ… ನಾವು ಏನಾದ್ರೂ ಕಳೆದುಕೊಳ್ತೀವಾ? ಇಲ್ಲ, ಏನಾದ್ರು ಲಾಭವಾಗುತ್ತಾ? ಬಹುಶಃ ಆಗಬಹುದು..! ಕನಿಷ್ಟ ಪಕ್ಷ ಪ್ರಯತ್ನವಾದ್ರು ಮಾಡೋಣ. ಯಾಕಂದ್ರೆ ಇದು ನಮ್ಮೆಲ್ಲರ ಜೀವದ ವಿಚಾರ” ಎಂದು ಸುದೀಪ್ ಟ್ವೀಟ್ ಮಾಡಿದ್ದರು. ಜೊತೆಗೆ ತಾವು ಕೂಡ ಮನೆಯ ಛಾವಣಿ ಮೇಲೆ ನಿಂತು ಚಪ್ಪಾಳೆ ತಟ್ಟಿದ್ದರು.
ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಚೇತನ್, “ ಸುದೀಪ್ ಸರ್… ಚಿತ್ರರಂಗದಲ್ಲಿ ನೀವು ಮಾಡಿರೋ ಕೆಲಸಗಳನ್ನು ಮತ್ತು ಸಾಧನೆಗಳನ್ನು ನಾನು ಗೌರವಿಸ್ತೀನಿ. ಅಪ್ಪ, ಅಮ್ಮ ಇಬ್ಬರು ವೈದ್ಯರು. ಅವರ ಮಗನಾಗಿ ವೈದ್ಯರಿಗೆ ಪ್ರತಿಯೊಬ್ಬರು ಗೌರವ ನೀಡಬೇಕಾಗುತ್ತದೆ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ, ಈ ರೀತಿಯ ಅವೈಜ್ಞಾನಿಕವಾದ ಎನರ್ಜಿ ಮೆಡಿಸಿನ್ ಥಿಯರಿಗಳನ್ನು ಹರಡುವ ಮೂಲಕ ಅಲ್ಲ. ಇಂತಹ ವಿಚಾರಗಳು ನಮ್ಮನ್ನು ತಪ್ಪುದಾರಿಗೆ ಕರೆದೊಯ್ಯುತ್ತವೆ. ಅಲ್ಲದೆ, ಮೌಢ್ಯ ಬಿತ್ತುತ್ತವೆ. ವಿಜ್ಞಾನದ ಮೂಲಕ ಕೊರೋನಾ ವಿರುದ್ಧ ಹೋರಾಡೋಣ” ಎಂದು ಹೇಳಿದ್ದಾರೆ.
Hear this …
Kindly participate ,,, do we lose anythn??, no ….
Do we gain?? Maybe ,,,but atleast let's try….
After all,,,, it's for our own lives.#ClapAt5pm pic.twitter.com/BBVULW7Kft— Kichcha Sudeepa (@KicchaSudeep) March 21, 2020
Sudeep Sir–
I respect your work in our industry
As son of 2 doctors, i agree our medical personnel must be appreciated
But not by spreading such unscientific 'energy medicine' theories, which lead us down a path of superstition & misinformation
Let's fight #corona w/ science https://t.co/1HuH1qyt8T
— Chetan Kumar (@ChetanAhimsa) March 22, 2020
#JantaCurfew ,,,, #clap,,,
Wat a wonderful thought,,wat a wonderful intention.
We weren't on an curfew,,, I felt we were giving mother nature some rest. This should be practiced,,, regularly. For ,,we shall exist,, only if our mother nature exists.#SaveNatureSaveyourself pic.twitter.com/pjTugvVLMA— Kichcha Sudeepa (@KicchaSudeep) March 22, 2020