Sunday, August 24, 2025
Google search engine
HomeUncategorizedರಾಜಕೀಯ ಬಿಟ್ರು ಮಂಡ್ಯ ಬಿಡಲ್ಲ; ಸಂಸದೆ ಸುಮಲತಾ ಅಂಬರೀಶ್

ರಾಜಕೀಯ ಬಿಟ್ರು ಮಂಡ್ಯ ಬಿಡಲ್ಲ; ಸಂಸದೆ ಸುಮಲತಾ ಅಂಬರೀಶ್

ಮಂಡ್ಯ; ಮಂಡ್ಯ ಜಿಲ್ಲೆ ಬಿಡುತ್ತೇನೆ ಅಂತ ಪಾಪಾ ಒಂದಷ್ಟು ಜನ ಕನಸು ಕಾಣ್ತಿದ್ದಾರೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ನೀಡಿದ್ದಾರೆ.

ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್, ಮಂಡ್ಯ ಜನರ ಆಸೆ ಪ್ರಕಾರ ನಾನು ಮಂಡ್ಯದ ರಾಜಕೀಯಕ್ಕೆ ಬಂದಿದ್ದು. ಮಂಡ್ಯ ಬಿಟ್ಟು ಮತ್ತೊಂದು ಕಡೆ ಏಕೆ ಹೋಗಬೇಕು. ಕ್ಷೇತ್ರ ಹುಡುಕುತ್ತಿದ್ದೇನೆ ಅನ್ನೋದು ಯಾರ ಕನಸು ಅಂತ ಗೊತ್ತಿಲ್ಲ. ಮಂಡ್ಯ ಬಿಡ್ತೇನೆ ಅಂತ ಪಾಪಾ ಒಂದಷ್ಟು ಜನ ಕನಸು ಕಾಣ್ತಿದ್ದಾರೆ ಎಂದರು.

ಇನ್ನು ಕೆಲವು ವಿರೋಧಿಗಳ ಕನಸಿಗೆ ನಾನು ಜಿಲ್ಲೆಯಲ್ಲಿ ಮುಂದುವರೆದ್ರಿಂದ ನೀರು ಚೆಲ್ಲಿದ ಹಾಗೆ ಆಗಿದೆ. ರಾಜಕೀಯಕ್ಕೆ ಬಂದೀರೋದೆ ಮಂಡ್ಯಕ್ಕೋಸ್ಕರವಾಗಿ. ರಾಜಕೀಯದಲ್ಲಿ ಏನೇನೋ ಹಾಗ್ಬೇಕು ಅಂತ ಮಂಡ್ಯಕ್ಕೆ ಬಂದಿಲ್ಲ. ರಾಜಕೀಯ ಬೇಕಾದ್ರೆ ಇವತ್ತಲ್ಲ ನಾಳೆ ಬಿಡ್ತೀನಿ ಆದರೆ ಮಂಡ್ಯ ಬಿಡಲ್ಲ ಎಂದು ಸಂಸದೆ ಸುಮಲತಾ ಅವರು ಪರೋಕ್ಷವಾಗಿ ವಿರೋಧಿಗಳಿಗೆ ತಿರಿಗೇಟು ನೀಡಿದರು.

RELATED ARTICLES
- Advertisment -
Google search engine

Most Popular

Recent Comments