ಹಾವೇರಿ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ‘ಲೋಕ’ ಗೆಲ್ಲುವ ತನಕ ಮನೆಗೆ ಹೋಗಲ್ಲ ಅಂತ ಶಪಥ ಮಾಡಿದ್ದಾರೆ..!
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಮುಗಿಯುವರೆಗೂ ಮನೆಗೆ ಹೋಗಲ್ಲ. 22 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವವರೆಗೂ ಮನೆ ಸೇರಲ್ಲ’ ಎಂದರು.
‘ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ..? ಮೋದಿ ಪ್ರಧಾನಿ ಆಗುವುದೂ ಅಷ್ಟೇ ಸತ್ಯ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿಸಾಟಿ ಯಾರೂ ಇಲ್ಲ’ ಅಂತ ಹೇಳಿದ್ರು. ನಮ್ಮ ತಪ್ಪಿನಿಂದ ಬಹಳ ಹತ್ತಿರದಲ್ಲಿ ರಾಜ್ಯದಲ್ಲಿ ಅಧಿಕಾರ ವಂಚಿತರಾದೆವು ಅಂತ ಅಭಿಪ್ರಾಯಪಟ್ಟರು.
‘ಲೋಕ’ ಗೆಲ್ಲೋವರೆಗೂ ಬಿಎಸ್ವೈ ಮನೆಗೆ ಹೋಗಲ್ವಂತೆ..!
RELATED ARTICLES