Monday, August 25, 2025
Google search engine
HomeUncategorizedರಾಜ್ಯಕ್ಕೆ ಖರ್ಗೆ ಆಗಮನ: ಕೆಪಿಸಿಸಿ ಕಛೇರಿಯಲ್ಲಿ ಮಹತ್ವದ ಸಭೆ

ರಾಜ್ಯಕ್ಕೆ ಖರ್ಗೆ ಆಗಮನ: ಕೆಪಿಸಿಸಿ ಕಛೇರಿಯಲ್ಲಿ ಮಹತ್ವದ ಸಭೆ

ಬೆಂಗಳೂರು: ಎಐಸಿಸಿ ಯ ನೂತನ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ್ ಖರ್ಗೆ ರವರು, ಅಕ್ಟೋಬರ್ 30 ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ಇದೇ ತಿಂಗಳು 30 ರಂದು ಆಗಮಿಸುತ್ತಿರುವ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿರ್ಕಾನ ಖರ್ಗೆ ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಅಕ್ಟೊಬರ್ 30 ರಂದು ಕೆಪಿಸಿಸಿ ಕಚೇರಿಯಲ್ಲಿ ಹಿರಿಯ ನಾಯಕರ ಮಹತ್ವದ ಸಭೆ ನಡೆಯಲಿದೆ. ಈ ಸಭೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಾಂಗ್ರೆಸ್ ನ ಹಲವು ನಾಯಕರುಗಳು ಭಾಗಿಯಾಗಲಿದ್ದಾರೆ. ಇನ್ನು ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರದ ಪ್ರಮುಖ ನಾಯಕರು ಭಾಗಿಯಾಗುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.

ಅಕ್ಟೋಬರ್ 30 ರ ಮಧ್ಯಾಹ್ನ 3 ಗಂಟೆಗೆ ಸಭೆ ನಿಗದಿ ಮಾಡಲಾಗಿದ್ದು, ಸಭೆಯಲ್ಲಿ ಭಾಗಿಯಾಗಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್, ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಮುಖ್ಯ ಪಾತ್ರವಯಿಸಲಿದ್ದಾರೆ. ಈ ಸಭೆಯು 2023 ವಿಧಾನ ಸಭಾ ಚುನಾವಣೆಗೆ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಈಗಾಗಲೇ ಎಐಸಿಸಿಗೆ ಕಂಟ್ರೋಲ್ ಕಮಿಟಿ ರಚನೆಯಾಗಿದ್ದು, ಎಐಸಿಸಿ ನೂತನ ಕಮಿಟಿ ಅಸ್ತಿತ್ವಕ್ಕೆ, ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಕಮಿಟಿಗಿದೆ. ಕಾಂಗ್ರೆಸ್ ನ ಹಿರಿಯ ನಾಯಕರಿಗೆ ಕಮಿಟಿಯಲ್ಲಿ ಸ್ಥಾನವಿದ್ದು, ಈ ಕಮಿಟಿಯಲ್ಲಿ ಒಟ್ಟು 47 ಮಂದಿ ಸದಸ್ಯರಿದ್ದಾರೆ. ಕಮಿಟಿಯಲ್ಲಿ ಮುಂದಿನ ಚುನಾವಣೆಯ ಕುರಿತು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುವ ಸಂಪೂರ್ಣ ಅಧಿಕಾರವಿದೆ.

RELATED ARTICLES
- Advertisment -
Google search engine

Most Popular

Recent Comments