ಬೆಂಗಳೂರು : ಹಿಂದು ಸಂಘಟನೆಗಳ ಟೀಕೆ ಬಳಿಕ ಶಾಸಕ ಜಮೀರ್ ಇಂದು ಶಾಸಕ ಜಮೀರ್ ಕಚೇರಿಯಲ್ಲಿ ಇಂದು ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಲಿದ್ದಾರೆ.
ನಗರದಲ್ಲಿ ಮೊದಲ ಬಾರಿಗೆ ಶಾಸಕ ಜಮೀರ್ ಕಚೇರಿಯಲ್ಲಿ ಮೊಳಗುತ್ತೆ ಗಣಪನ ಭಜನೆ ಎಂದು ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಈದ್ಗಾ ವಿವಾದದ ವಿಷ್ಯದಲ್ಲಿ ಜಮೀರ್ ಇಮೇಜ್ ಫುಲ್ ಡ್ಯಾಮೇಜ್ ಆಗಿದ್ದು, ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಎಲ್ಲ ಎಂದು ಹೇಳಿ ವಿವಾದಕ್ಕೆ ಸಿಲುಕಿದ ಜಮೀರ್ ಈಗ ಹಿಂದೂಗಳ ಒಲೈಕೆಗೆ MLA ಕಚೇರಿಯಲ್ಲೇ ಗಣೇಶೋತ್ಸವ ಆಚರಿಸಲಿದ್ದಾರೆ.
ಇಂದು ಬೆಳಗ್ಗೆ 9-15 ರಿಂದ 10 ರೊಳಗೆ ಗಣೇಶ ಪ್ರತಿಷ್ಠಾಪನೆ ಮಾಡಲಿರೋ ಜಮೀರ್, ಗಣೇಶ ಪ್ರತಿಷ್ಠಾಪನೆ ಹಿಂದಿದ್ಯಾ ಜಮೀರ್ ರಾಜಕೀಯ ತಂತ್ರ ರೂಪಿಸಿದ್ದು, 4 ಬಾರಿ ಶಾಸಕರಾದ್ರೂ ಇಲ್ಲಿಯವರೆಗೆ ಗಣೇಶ ಪ್ರತಿಷ್ಠಾಪನೆ ಮಾಡಿರದ ಚಾಮರಾಜಪೇಟೆ ಶಾಸಕ, ಆದ್ರೆ ಮೊದಲ ಬಾರಿಗೆ ದಿಢೀರ್ ಈ ನಿರ್ಧಾರ ಕೈಗೊಂಡಿದ್ದು, ಸಾರ್ವಜನಿಕರಲ್ಲಿ ಭಾರೀ ಕುತೂಹಲ ಮೂಡಿದೆ.



