Wednesday, September 3, 2025
HomeUncategorizedಸಿದ್ದರಾಮಯ್ಯನನ್ನು ಭೇಟಿ ಮಾಡಿದ್ದೇಕೆ ಸಿಎಂ ಇಬ್ರಾಹಿಂ..?

ಸಿದ್ದರಾಮಯ್ಯನನ್ನು ಭೇಟಿ ಮಾಡಿದ್ದೇಕೆ ಸಿಎಂ ಇಬ್ರಾಹಿಂ..?

ಬೆಂಗಳೂರು : ಮಗಳ‌ ಮದುವೆಗೆ ಸಿದ್ದರಾಮಯ್ಯ ಅವರಿಗೆ ಆಹ್ವಾನ ಪತ್ರ ನೀಡಲು ಬಂದಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ಬಳಿಕ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ,

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದರ ಹೊರತಾಗಿ ಬೇರೇನೂ ಮಾತನಾಡಿಲ್ಲ. ಸಿದ್ದರಾಮಯ್ಯ ಅವರಿಗೆ ೭೫ ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮ “ಸಿದ್ದರಾಮೋತ್ಸವ” ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು ಹೋಗುವುದಕ್ಕೆ ನಮ್ಮದು ಬೇರೆಯ ಕಂಪನಿ ಹೀಗಾಗಿ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದರು.

ಇನ್ನು, ಸಿದ್ದರಾಮಯ್ಯ ಅವರು ಎರಡನೆ ಮದುವೆ ಆದರೆ ಹೋಗ್ತೇನೆ.ರಾಷ್ಟ್ರಪತಿ‌ ಚುನಾವಣೆಯಲ್ಲಿ ದೌಪದಿ ಮುರ್ಮು ಬೆಂಬಲ ವಿಚಾರವಾಗಿ ಮಾತನಾಡಿದ ಅವರು, ಜುಲೈ ೧೮ ರಂದು ಪಕ್ಷದ ನಾಯಕರ ಸಭೆ ಕರೆದು ತೀರ್ಮಾನ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಧ್ಯಕ್ಷ ಸಿ.ಎಂ‌ ಇಬ್ರಾಹಿಂ ಸ್ಪಷ್ಟನೆ ನೋಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments