ಹೊಸ ವರ್ಷದ ದಿನವೇ ಜ್ಞಾನ ದೇಗುಲದಲ್ಲಿ ಇದೆಂಥಾ ಅನಾಚಾರ

ರಾಯಚೂರು : ಶಾಲೆಯೆಂದರೆ ವಿದ್ಯಾದೇಗುಲವೆಂದು ಎಲ್ಲರೂ ಹೇಳತ್ತಾರೆ, ಆದರೆ ಜ್ಞಾನ ದೇಗುಲದಲ್ಲಿ ಹೊಸ ವರ್ಷದ ನಿಮಿತ್ತ ಗುಂಡು-ತುಂಡು ಪಾರ್ಟಿ ನಡೆದಿದೆ.

ರಾಯಚೂರಿನ ರಬ್ಬಣಕಲ್ ಕ್ಯಾಂಪ್​ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಾಸ್​ ರೂಮಿನ ಬೀಗ ಮುರಿದು, ದಾಖಲಾತಿಗಳನ್ನು ಚಲ್ಲಾಪಿಲ್ಲಿ ಮಾಡಿದ್ದಾರೆ. ಅಲ್ಲದೇ , ಅಡುಗೆ ಕೋಣೆಯಲ್ಲಿದ್ದ ಮೊಟ್ಟೆ, ಹಾಲಿನಪುಡಿ, ಅಕ್ಕಿ, ಸಕ್ಕರೆ, ಅಡುಗೆಗೆ ಬಳಸುವ ಎಣ್ಣೆ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಿರುವ ದುರ್ಘಟನೆ ನಡೆದಿದೆ.

ಮಕ್ಕಳ ಆಹಾರ ಪರಿಕರಗಳನ್ನು ಬಿಡದೆ ದುಷ್ಕರ್ಮಿಗಳು ಕದ್ದು ಹೋಗಿದ್ದಾರೆ. ಹಾಗೂ ಶಾಲಾ ದಾಖಲಾತಿಗಳ ಮೇಲೆ ಮದ್ಯದ ಪ್ಯಾಕೇಟ್​ ಇಟ್ಟು ವಿಕೃತಿ ಆಟವನ್ನು ಮೆರೆದಿದ್ದಾರೆ. ಶಾಲೆಯ ಆವರಣದಲ್ಲಿ ಮದ್ಯದ ಬಾಟಲ್​ಗಳು, ಮಾಂಸದ ತುಂಡುಗಳು ಕಂಡುಬಂದಿದ್ದವು.ಇದನೆಲ್ಲಾ ಬೆಳ್ಳಿಗೆ ಶಾಲೆಗೆ ಬಂದ ಶಾಲಾ ಮುಖ್ಯೋಪಾಧ್ಯಯರಾದ ಮಾನ್ವಿ ಅವರು ಗಮಿನಿಸಿ, ತಕ್ಷಣ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದಾರೆ.

RELATED ARTICLES

Related Articles

TRENDING ARTICLES