Saturday, September 13, 2025
HomeUncategorized‘ಬಿಎಸ್ ವೈ ವಿರುದ್ಧ ಮತ್ತೆ ಗುಡುಗಿದ ಯತ್ನಾಳ್’

‘ಬಿಎಸ್ ವೈ ವಿರುದ್ಧ ಮತ್ತೆ ಗುಡುಗಿದ ಯತ್ನಾಳ್’

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಯತ್ನಾಳ್ ಪಾಟೀಲ್ ಇಂದು ಮತ್ತೆ ವಿಧಾನಸೌಧದಲ್ಲಿ ಗುಡುಗಿದ್ದಾರೆ.

ಭ್ರಷ್ಟಾಚಾರ ಮುಕ್ತ ಆಡಳಿತ, ವಂಶಪಾರಂಪರ್ಯ ಆಡಳಿತ ಕೊನೆಯಾಗಬೇಕೇಂದು ಪ್ರಧಾನಿ ನರೇಂದ್ರ ಮೋದಿಯವರ ಕನಸು ಆಗಿದೆ.

ಒಂದು ಕುಟುಂಬಕ್ಕೆ ಒಂದೇ ಹುದ್ದೆ ಕೊಡಬೇಕು ಎಂದು ನಿಯಮ ಮಾಡಿ. ಒಂದೇ ಮನೆಯವರಿಗೆ ಶಾಸಕ, ಸಂಸದ, ನಿಗಮ ಮಂಡಳಿ ಕೊಡಬಾರದು. ಪ್ರಧಾನಿ ನರೇಂದ್ರ ಮೋದಿಯವರ ಒನ್ ಟೈ ಒನ್ ಪೋಸ್ಟ್ ಎಂಬ ಆಶಯವಾಗಿದೆ ಎಂದರು. ಒಂದೇ ಮನೆಗೆ ಎಂ.ಪಿ. ಎಂ ಎಲ್ ಎ ಸ್ಥಾನಗಳನ್ನು ಕೊಡಬಾರದು ಎಂದು  ಈ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಪತ್ರ ಬರೆಯುತ್ತೇನೆ ಎಂದರು.

ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತಿರುವ ಕಾರ್ಯಕರ್ತರಿಗೂ ಅಧಿಕಾರ ಕೊಡಬೇಕು. ಕಾರ್ಯಕರ್ತರು ಇವರನ್ನು ತಲೆ ಮೇಲೆ ಹೊತ್ತು ತಿರುಗಬೇಕಾ. ಕಾರ್ಯಕರ್ತರು ಸಮರ್ಥರು ಇದ್ದಾರೆ ಅವರನ್ನು ಬೆಳೆಸಬೇಕು ಎಮದು ಬೆಂಗಳೂರಿನಲ್ಲಿ ಶಾಸಕ ಬಸನಗೌಡ ಪಾಟೀಲ್ ಹೇಳಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments