ಬೀದರ್ : ಅಪರೇಷನ್ ಸಿಂಧೂರ ಯಶಸ್ವಿ ಹಿನ್ನೆಲೆ ಔರಾದ್ನಲ್ಲಿ ತಿರಂಗಾ ಯಾತ್ರೆ ನಡೆಯುತ್ತಿದ್ದು. ಈ ತಿರಂಗ ಯಾತ್ರೆಯಲ್ಲಿ ಶಾಸಕ ಪ್ರಭು ಚೌಹಾಣ್ ತೀವ್ರ ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಆಪರೇಷನ್ ಸಿಂಧೂರ್ ಯಶಸ್ವಿ ಬೆನ್ನಲ್ಲೇ ರಾಷ್ಟ್ರದಲ್ಲಿ ತಿರಂಗ ಯಾತ್ರೆ ನಡೆಯುತ್ತಿದೆ. ಇದರ ಭಾಗವಾಗಿ ಬೀದರ್ನಲ್ಲಿ ನಡೆದ ತಿರಂಗ ಯಾತ್ರೆಯಲ್ಲಿ ಔರಾದ್ ಶಾಸಕ ಪ್ರಭು ಚೌಹಾಣ್ ಅಸ್ವಸ್ಥರಾಗಿದ್ದಾರೆ. ಬೀದರ್ ನಗರದ ಐಬಿಯಿಂದ ಎಪಿಎಮ್ಸಿ ವೃತ್ತದವರೆಗೆ ನಡೆದ ತಿರಂಗಾ ಯಾತ್ರೆಯಲ್ಲಿ ತಿರಂಗ ಧ್ವಜ ಹಿಡಿದು ಹೆಜ್ಜೆ ಹಾಕಿದ ಪ್ರಭು ಚೌಹಾಣ್ ಕುಳಿತಲ್ಲಿಯೇ ತೀವ್ರ ಅಸ್ವಸ್ಥರಾಗಿದ್ದಾರೆ.
ಇದನ್ನೂ ಓದಿ :ಗುಜರಾತ್ನಲ್ಲಿ ಮೋದಿ ರೋಡ್ಶೋ; ಕರ್ನಲ್ ಸೋಫಿಯಾ ಕುಟುಂಬಸ್ಥರಿಂದ ಮೋದಿಗೆ ಪುಷ್ಪವೃಷ್ಟಿ
ಪ್ರಭು ಚೌಹಾಣ್ ಅಸ್ವಸ್ಥರಾಗಿದ್ದನು ಗಮನಿಸಿದ ಬಿಜೆಪಿ ಕಾರ್ಯಕರ್ತರು ಅವರನ್ನು ಕೂಡಲೇ ಔರಾದ್ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೂ ಈ ತಿರಂಗ ಯಾತ್ರೆಯಲ್ಲಿ ಬೀದರ್ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾತ್ ಪಾಟೀಲ್, ಬಿಜೆಪಿ ಮುಖಂಡರು ಹಾಗೂ ಸ್ವಾಮೀಜಿಗಳು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಇದನ್ನೂ ಓದಿ :ಮುಂಗಾರು ಮಳೆಗೆ ಮಂಗಳೂರು ತತ್ತರ; ವಿಪತ್ತು ನಿರ್ವಹಣೆ NDRF ತಂಡಗಳಿಂದ ಸಿದ್ದತೆ