ಬೆಂಗಳೂರು : ಭಾರಿ ಮಳೆಯಿಂದಾಗಿ ಬೆಂಗಳೂರಿನ ಅನೇಕ ಪ್ರದೇಶಗಳು ಹಾನಿಗೆ ಒಳಗಾಗಿದ್ದು. ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಬಿಜೆಪಿ ನಾಯಕರು ಭೇಟಿ ನೀಡಿದ್ದಾರೆ. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿ ವಿಪಕ್ಷ ನಾಯಕ ಆರ್.ಅಶೋಕ್ “ಕಾಂಗ್ರೆಸ್ ಜನರ ಸಮಾಧಿ ಮೇಲೆ ಸಮಾವೇಶ ಮಾಡುತ್ತಿದೆ. ಅವರಿಗೆ ಮಾನ ಮರ್ಯಾದೆ ಇದ್ದರೆ ಸಮಾವೇಶವನ್ನ ರದ್ದು ಮಾಡುತ್ತಿದ್ದರು” ಎಂದು ಹೇಳಿದರು.
ಮಾಧ್ಯಮದ ಜೊತೆ ಮಾತನಾಡಿದ ಆರ್. ಅಶೋಕ್ “ಕಾಂಗ್ರೆಸ್ ಜನರ ಸಮಾಧಿ ಮೇಲೆ ಸಮಾವೇಶ ಮಾಡುತ್ತಿದೆ. ನಿಮಗೆ ಮಾನ ಮರ್ಯಾದೆ ಇದ್ದಿದ್ದರೆ ಸಮಾವೇಶವನ್ನ ಕೂಡಲೇ ರದ್ದು ಮಾಡಿ. ಈ ಹಿಂದೆಯೋ ಸಾಯಿ ಲೇಔಟ್ಗೆ ಭೇಟಿ ನೀಡಿದಾಗ ಸಮಸ್ಯೆಯನ್ನ ಸರಿ ಮಾಡ್ತೀವಿ ಅಂತ ಹೇಳಿದ್ರಿ. ಆದರೆ ಡಿಕೆಶಿ ಅವರು ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ. ಎಲ್ಲಾ ರಾಜಕಾಲುವೆಗಳಿಗೂ ಸೆನ್ಸರ್ ಹಾಕುತ್ತೀವಿ ಅಂದಿದ್ರಿ, ನಿಮ್ಮ ಸೆನ್ಸರ್ ಎಲ್ಲಿ.
ಇದನ್ನೂ ಓದಿ :ರಾಜಧಾನಿ ಎಕ್ಸ್ಪ್ರೆಸ್ ಸೇರಿದಂತೆ 2 ರೈಲುಗಳ ಹಳಿ ತಪ್ಪಿಸಲು ವಿಫಲ ಯತ್ನ
ಕಾಂಗ್ರೆಸ್ ಅವರಿಗೆ ಸೆನ್ಸ್ ಇಲ್ಲ. ಡಿಕೆ ಶಿವಕುಮಾರ್ ಅವರು ಡೈಲಾಗ್ ಕಿಂಗ್. ಅವರು ಟೀಕೆ ಸಾಯುತ್ತೆ. ಕೆಲಸ ಉಳಿಯುತ್ತೆ ಅಂತ ಹೇಳಿದ್ರು. ಆದರೆ ಹವಮಾನ ಇಲಾಖೆ ಒಂದು ತಿಂಗಳ ಹಿಂದೆ ಭಾರಿ ಮಳೆ ಬೀಳುತ್ತೆ ಅಂತ ಹೇಳಿತ್ತು. ಈಗಿದ್ದಾಗ ಕಾಂಗ್ರೆಸ್ ಅವರು ಏನು ಮಣ್ಣು ತಿನ್ನುತಿದ್ದರಾ.
ಕಾಂಗ್ರೆಸ್ ಅವರು ಪಂಚೆ ಎತ್ಕೊಂಡು ಸಮಾವೇಶಕ್ಕೆ ಹೋಗ್ತಾರೆ. 5 ಜನ ಸತ್ತಿದ್ದಾರೆ. ಸಾವಿನ ಮೇಲೆ ಕಾಂಗ್ರೆಸ್ ಸಮಾವೇಶ ಮಾಡುತ್ತಿದೆ. ಬಾಂಬ್ ಹಾಕಿದ್ದಕ್ಕೆ ಸಾಕ್ಷಿ ಕೊಡಿ ಅಂತೀರಾ. ಆದರೆ ನೀವು ಬೆಂಗಳೂರಿನಲ್ಲಿ ಎಷ್ಟು ಪಾತ್ ಹೋಲ್ ಇದೆ ಅಂತ ಮೊದಲು ಸಾಕ್ಷಿ ಕೊಡಿ. ಬೊಮ್ಮಾಯಿ ಮತ್ತೆ ಯಡಿಯೂರಪ್ಪ ಇದ್ದಾಗ ಪ್ರತಿ ವರ್ಷ 8 ಸಾವಿರ ಕೋಟಿ ಬೆಂಗಳೂರುಗೆ ಕೊಟ್ಟಿದ್ದಾರೆ. ಇವಾಗ 8 ಸಾವಿರ ಕೋಟಿ ಸುರಂಗಕ್ಕೆ ಹಾಕೋಕೆ ಹೋಗಿದ್ದಾರೆ. ಅದಿನ್ನೂ ಮುಗಿಯೋದಕ್ಕೆ 20-30 ವರ್ಷ ಸಮಯ ಆಗುತ್ತೆ. ಇದನ್ನೂ ಓದಿ :ಅಭಿಷೇಕ್ ಶರ್ಮಾ ಜೊತೆ ಅನುಚಿತ ವರ್ತನೆ; IPL ಪಂದ್ಯದಿಂದ ದಿಗ್ವೇಶ್ ರಾಥಿ ಅಮಾನತು
ಕಾಂಗ್ರೆಸ್ ಸರ್ಕಾರ ಮನೆ ಬಾಗಿಲಿಗೆ ಬರುತ್ತೆ ಅಂತ ಹೇಳಿದ್ರಿ, ಆದರೆ ಇವಾಗ ಮನೆ ಬಾಗಿಲಿಗೆ ಹಾವು, ಚೇಳುಗಳು ಬರ್ತೀದೆ. ಇವತ್ತು ರೋಡುಗಳನ್ನು ಸ್ವೀಮಿಂಗ್ ಪುಲ್ ಮಾಡಿದ್ದೀರಾ. ಜನ ನಿಮಗೆ ಛೀಮಾರಿ ಹಾಕುತ್ತಿದ್ದಾರೆ. ಈ ಕಾಂಗ್ರೆಸ್ ಸರ್ಕಾರ ರಾಜ್ಯದಿಂದ ಹೋಗೋವರೆಗೂ ಏನು ಅಭಿವೃದ್ದಿ ಆಗಲ್ಲ ಎಂದು ಹೇಳಿದರು.