ದಾವಣಗೆರೆ : ಮಾಜಿ ಸಚಿವ ರೇಣುಕಾಚಾರ್ಯ ಸಚಿವ ಸಂತೋಷ್ ಲಾಡ್ ಮತ್ತು ಕೊತ್ತೂರು ಮಂಜುನಾಥ್ ವಿರುದ್ದ ಆಕ್ರೋಶ ಹೊರಹಾಕಿದ್ದು. ಇಬ್ಬರನ್ನು ಜನರು ಓಡಾಡಿಸ್ಕೊಂಡು ಹೊಡಿಬೇಕು ಎಂದು ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ರೇಣುಕಚಾರ್ಯ ‘ಅಯೋಗ್ಯ ಕೊತ್ತೂರು ಮಂಜುನಾಥ್ ಮತ್ತು ಸಂತೋಷ್ ಲಾಡ್ ಇಬ್ಬರು ಸೇನೆ ಬಗ್ಗೆ ಅಪಪ್ರಚಾರದ ಹೇಳಿಕೆ ನೀಡುತ್ತಿದ್ದಾರೆ. ಕೊತ್ತೂರು ಮಂಜುನಾಥ್ ಕೊತ್ವಾಲ್ ಶಿಷ್ಯನಾಗಿದ್ದಾನೆ. ಛತ್ರಪತಿ ಶಿವಾಜಿ ವಂಶದಲ್ಲಿ ಹುಟ್ಟಿದ ಸಂತೋಷ್ ಲಾಡ್ ದೇಶದ್ರೋಹಿ ಹೇಳಿಕೆ ನೀಡಿದ್ದಾನೆ ಇವರನೆಲ್ಲಾ ಯಾವುದರಲ್ಲಿ ಹೊಡಿಬೇಕು ಎಂದು ಹೇಳಿದರು.
ಇದನ್ನೂ ಓದಿ:ಕರ್ನಲ್ ಖುರೇಷಿ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದ ಸಚಿವನ ವಿರುದ್ದ SIT ರಚನೆಗೆ ಸುಪ್ರೀಂ ಸೂಚನೆ
ಮುಂದುವರಿದು ಮಾತನಾಡಿದ ರೇಣುಕಾಚಾರ್ಯ “ಕೃಷ್ಣ ಬೈರೇಗೌಡ, ಸಿಎಂ ಸಿದ್ದರಾಮಯ್ಯ, ಕೊತ್ತೂರು, ಸಂತೋಷ್ ಲಾಡ್ ಎಲ್ಲರೂ ಸೇನೆ ವಿರುದ್ದವಾಗಿ ಮಾತನಾಡುತ್ತಾರೆ. ವಿಡಿಯೋ ಕೊಟ್ಟರು ಆಪರೇಷನ್ ಸಿಂಧೂರ್ ಬಗ್ಗೆ ಸಾಕ್ಷಿ ಕೇಳ್ತಾರೆ. ಅದೇ ಮನಮೋಹನ್ ಸಿಂಗ್ ಅಧಿಕಾರದಲ್ಲಿದ್ದಾಗ ಎಷ್ಟು ಜನ ಸತ್ತಿದ್ದಾರೆ. ಸಂತೋಷ್ ಲಾಡ್ ಪದೇ ಪದೇ ಮೋದಿ ವಿರುದ್ದ ಮಾತನಾಡುತ್ತಾರೆ. ಸಂತೋಷ್ ಲಾಡ್, ಮಂಜುನಾಥ್ ಕೊತ್ತೂರ್ಗೆ ಜನರು ಓಡಾಡಿಸಿಕೊಂಡು ಹೊಡಿಬೇಕು ಎಂದು ಹೇಳಿದರು.