ಬೆಂಗಳೂರು : ಬಿಜೆಪಿ ರೆಬಲ್ ನಾಯಕ ಕುಮಾರ್ ಬಂಗಾರಪ್ಪ ಬೆಂಗಳೂರಿನಲ್ಲಿ ಮಾಧ್ಯಮ ಸುದ್ದಿಗೋಷ್ಟಿ ನಡೆಸಿದ್ದು. ವಕ್ಫ್ ಬಿಲ್ ಅಂಗೀಕರಿಸಿದಕ್ಕೆ ಧನ್ಯವಾದ ಅರ್ಪಿಸಿದರು. ಈ ವೇಳೆ ಬಿಜೆಪಿ ಬೆಲೆ ಏರಿಕೆ ವಿರುದ್ದದ ಪ್ರತಿಭಟನೆ ಕುರಿತು ಮಾತನಾಡಿದ್ದು. ಪಕ್ಷ ಕಟ್ಟಿ ಬೆಳೆಸಿದ ಯಡಿಯೂರಪ್ಪನವರು ಮಗನಿಗಾಗಿ ಪ್ರತಿಭಟನೆ ಬಂದು ಕುಳಿತಿದ್ದಾರೆ. ವಿಜಯೇಂದ್ರನೇ ಅವರನ್ನು ಕರೆದುಕೊಂಡು ಬಂದಿದ್ದಾರೆ ಎಂದು ಹೇಳಿದರು.
ಬಿಜೆಪಿಯಲ್ಲಿನ ಒಳಜಗಳ ಯತ್ನಾಳ್ ಉಚ್ಚಾಟನೆಯ ನಂತರವೂ ಕಡಿಮೆಯಾದಂತೆ ಕಾಣುತ್ತಿಲ್ಲ. ಇದಕ್ಕೆ ಪೂರಕವಾಗುವಂತೆ ಬಿಜೆಪಿ ರೆಬಲ್ಸ್ ನಾಯಕರು ಈಗಲೂ ಯತ್ನಾಳ್ ಕಡೆ ಹೇಳಿಕೆ ನೀಡುತ್ತಿದ್ದು. ವಿಜಯೇಂದ್ರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯಿಂದಲೂ ದೂರ ಸರಿದಿದ್ದಾರೆ. ಜೊತೆಗೆ ಇಂದು ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಕುಮಾರ್ ಬಂಗಾರಪ್ಪ ಈ ಕುರಿತು ಹೇಳಿಕೆ ನೀಡಿದ್ದು. ‘ಯಡಿಯೂರಪ್ಪನವರು ಮಗನಿಗಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅಂತಹ ಹಿರಿಯ ಮುತ್ಸದ್ದಿ ನಾಯಕನನ್ನು ವಿಜಯೇಂದ್ರ ಪ್ರತಿಭಟನೆಗೆ ಕರೆತಂದಿದ್ದಾರೆ ಎಂದು ಹೇಳಿದರು.
ವರಿಷ್ಟರ ಜೊತೆ ಮಾತನಾಡಿ ಯತ್ನಾಳರನ್ನು ಪಕ್ಷಕ್ಕೆ ಮರಳಿ ಕರೆತರುತ್ತೇವೆ..!
ಯತ್ನಳಾ ಉಚ್ಚಾಟನೆ ಕುರಿತು ಮಾತನಾಡಿದ ಕುಮಾರ್ ಬಂಗಾರಪ್ಪ ‘ಯತ್ನಾಳ್ ಉಚ್ಚಾಟನೆ ನಮಗೆ ನೋವುಂಟು ಮಾಡಿದೆ, ಆದರು ನಾವು ಹೋರಾಟ ಮಾಡ್ತೀವಿ, ನಮಗೆ ಪಕ್ಷದ ಮೇಲೆ ಯಾವುದೇ ಸಿಟ್ಟಿಲ್ಲ, ನಮಗೆ ಇವರ ಗುಂಪಿನ ಮೇಲೆ ಇದೆ. ಇನ್ನೂ ಮೂರು ವರ್ಷ ಇದೆ ಹೋರಾಟ ಮಾಡಬೇಕಿದೆ. ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆ ಇದೆ. ಅದನ್ನು ಉಪಯೋಗ ಮಾಡಿಕೊಳ್ಳಬೇಕಿದೆ.
ಇದನ್ನೂ ಓದಿ : ಬಿಜೆಪಿ ಕಾಯಕರ್ತ ಆತ್ಮಹ*ತ್ಯೆ; ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ದ ಗಂಭೀರ ಆರೋಪ..!
ಸ್ಥಳೀಯ ಚುನಾವಣೆಗಳು ಒಂದೂ ಆಗಿಲ್ಲ, ಇಲ್ಲಿ ಒಂದು ಮಳೆ ಬಂದರೆ ಸಾಕು ಅಧೋಗತಿಗೆ ಬೆಂಗಳೂರು ಹೋಗ್ತಾ ಇದೆ. ಆದಷ್ಟು ಬೇಗ ನಾವು ವರಿಷ್ಠರ ಜೊತೆ ಮಾತನಾಡಿ ಮನವರಿಕೆ ಮಾಡಿಕೊಡ್ತೀವಿ. ಯತ್ನಾಳ್ರನ್ನು ಪಕ್ಷಕ್ಕ ವಾಪಸ್ ತಗೆದುಕೊಳ್ಳಿ ಅಂತ ಹೇಳ್ತೀವಿ. ಅವರ ಭಾಷೆ ಕಟು ಆಗಿರಬಹುದು. ಮುಂದಿನ ಚುನಾವಣೆಗೆ ಅವರನ್ನು ಭದ್ರ ಮಾಡ್ತೀವಿ ಎಂದು ಹೇಳಿದರು.
ವಕ್ಫ್ ಬಿಲ್ಪಾಸ್ ಆಗಿದ್ದಕ್ಕೆ ಕುಮಾರ್ ಬಂಗಾರಪ್ಪ ಧನ್ಯವಾದ..!
ವಕ್ಫ್ ಬಿಲ್ಪಾಸ್ ಆಗಿದೆ ಇದಕ್ಕೆ ಧನ್ಯವಾದಗಳನ್ನು ಹೇಳಿದ ಕುಮಾರ್ ಬಂಗಾರಪ್ಪ ‘ಹತ್ತಾರು ದಶಕದಿಂದ ಇದ್ದ ಸಮಸ್ಯೆ ಬಗೆಹರಿದಿದೆ. ರಾಜ್ಯ ಸಭೆಯಲ್ಲೂ ಇದು ಅನುಮೋದನೆ ಆಗಿದೆ, ನಾವು ಕರ್ನಾಟಕದಲ್ಲಿ ಹೋರಾಟ ಮಾಡಿದ್ದೆವು, ನಮ್ಮ ಅನೇಕ ವಿಚಾರ ದಾಖಲೆ ಸಮೇತವಾಗಿ ಜಗದಾಂಬಿಕಾ ಪಾಲ್ಗೆ ನೀಡಿದ್ದೆವು. ಅವರ ಮಾರ್ಗದರ್ಶನದಲ್ಲಿ ನಾವು ನಡೆದೆವು. ಹಾಗಾಗಿ ನಮಗೆ ಸಮಸ್ಯೆ ಏನಿದೆ ಅನ್ನೋದು ಗೊತ್ತಾಯ್ತು. ದೇಶಕ್ಕೆ ಇಂದು ನಿರಾಳವಾಗಿದೆ.
ರಾಷ್ಟ್ರದಲ್ಲಿ ಆಗಿರುವ ಸಮಸ್ಯೆ ಈ ಬಿಲ್ ನಿಂದ ಬಗಹರಿದಿದೆ. ಜೆಪಿಸಿ ರಚನೆ ಆದ ಬಳಿಕ ಮಾಹಿತಿ ಸಂಗ್ರಹದ ಬಳಿಕ ಈ ಕಾನೂನು ಮಾಡಿದ್ದಾರೆ. ನಮಗೂ ಒಂದು ಶಕ್ತಿ ಸಿಕ್ಕಂತಾಯ್ತು. ಮುಡಾ ಹಾಗೂ ವಾಲ್ಮಿಕಿ ಹೋರಾಟ ಅರ್ಧಕ್ಕೆ ನಿಲ್ತು. ಆದರೆ ವಕ್ಫ್ ಹೋರಾಟಕ್ಕೆ ನಾವು ತಾರ್ಕಿಕ ಅಂತ್ಯ ಕಾಣಿಸಿದ್ದೇವೆ ಎಂದು ಹೇಳಿದರು.


