Thursday, September 4, 2025
HomeUncategorizedನ್ಯೂಕ್ಲಿಯರ್ ಶಕ್ತಿಗಿಂತ, ಆಧ್ಯಾತ್ಮಿಕ ಶಕ್ತಿ ದೊಡ್ಡದು : ಉಪ ರಾಷ್ಟ್ರಪತಿ ಜಗದೀಪ್​ ಧನ​ಕರ್​

ನ್ಯೂಕ್ಲಿಯರ್ ಶಕ್ತಿಗಿಂತ, ಆಧ್ಯಾತ್ಮಿಕ ಶಕ್ತಿ ದೊಡ್ಡದು : ಉಪ ರಾಷ್ಟ್ರಪತಿ ಜಗದೀಪ್​ ಧನ​ಕರ್​

ಹುಬ್ಬಳ್ಳಿ : ಜಿಲ್ಲೆಯ ವರೂರಿನ ನವಗ್ರಹತೀರ್ಥ ಕ್ಷೇತ್ರದಲ್ಲಿ ಮಹಾಮಸ್ತಾಭೀಷೇಕ ನಡೆಯುತ್ತಿದ್ದು. ಎರಡನೇ ದಿನವಾದ ಇಂದು ಉಪರಾಷ್ಟ್ರಪತಿ ಜಗದೀಪ್​ ಧನಕರ್​, ವೀರೇಂದ್ರ ಹೆಗ್ಗಡೆ ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಉಪ ರಾಷ್ಟ್ರಪತಿ ಜಗದೀಪ್​ ಧನಕರ್​ ನ್ಯೂಕ್ಲಿಯರ್ ಶಕ್ತಿಗಿಂತ, ಆಧ್ಯಾತ್ಮಿಕ ಶಕ್ತಿ ದೊಡ್ಡದು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು ‘ ಜೈನ ಧರ್ಮ ಮೂರು ವಿಚಾರಗಳನ್ನು ಪ್ರತಿಬಿಂಬಿಸುತ್ತೆ
ನಂಬಿಕೆ, ಜ್ಞಾನ, ಆಧ್ಯಾತ್ಮದ ಪ್ರತಿರೂಪವೇ ಜೈನ ಧರ್ಮ. ಸುಮೇರು ಪರ್ವತ ಧಾರ್ಮಿಕತೆಯ ಮೇರು ಪರ್ವತವಾಗಿದೆ. ಸದ್ಯ ವಿಶ್ವದಲ್ಲಿ ಅಶಾಂತಿ ಇದ್ದು. ಶಾಂತಿಯ ಅಗತ್ಯವಿದೆ. ಅದಕ್ಕೆ ಜನರು ಜೈನ ಧರ್ಮ ತತ್ವಗಲನ್ನು ಅಳವಡಿಸಿಕೊಳ್ಳಬೇಕು.

ಇದನ್ನೂ ಓದಿ:ಪಂಚಭೂತಗಳಲ್ಲಿ ಲೀನರಾದ ಹಿರಿಯ ನಟ ಸರಿಗಮ ವಿಜಿ !

ಮಠ-ಮಂದಿರಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ, ಅವು ಸಾಮಾಜಿಕ ಬದಲಾವಣೆಗೂ ಕಾರಣವಾಗುವ ಕೇಂದ್ರಗಳಾಗಿವೆ. ಇಂದಿನ ಪ್ರಪಂಚ ಜಾಗತಿಕ ಬಿಕ್ಕಟ್ಟುಗಳನ್ನು ಹೊಂದಿದೆ. ಇಲ್ಲಿ ಮಾತುಕತೆಗೆ ಬೆಲೆ ಕೊಡಕಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಾತುಕತೆಗೆ ಬೆಲೆ ಕೊಡುವಂತಾಗಬೇಕಿದೆ. ಶಾಂತಿ ಮಂತ್ರವನ್ನು ಜಪಿಸಬೇಕಿದೆ ಎಂದು ಹೇಳಿದರು.

ಜಾಗತಿಕ ಮಟ್ಟದಲ್ಲಿ ಭಾರತ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ವಸುದೈವ ಕುಟುಂಬಕಮ್​ ಎಂಬ ಪರಿಕಲ್ಪನೆ ಎಲ್ಲಾ ಕಡೆ ಬರಬೇಕಿದೆ. ಆಗ ಮಾತ್ರವೇ ಭಾರತ ವಿಶ್ವಗುರುವಾಗಲು ಸಾಧ್ಯವಾಗುತ್ತದೆ. ಭಾರತ ಅತ್ಯಂತ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ. ಆದರೆ ಈ ಸಿರಿವಂತ ಸಂಸ್ಕೃತಿ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದೆ.

ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಮಾನವೀಯ ಮೌಲ್ಯಗಳು ಮುಂದೆ ಶಾಂತಿಗೆ ನಾಂದಿಯಾಡುತ್ತವೆ. ನಮ್ಮ ನಾಗರಿಕತೆಗೆ ಸುಮಾರು 5 ಸಾವಿರ ವರ್ಷಗಳ ಅತ್ಯುನ್ನತ ಆಧ್ಯಾತ್ಮಿಕ ಇತಿಹಾಸವಿದೆ. ಇಂತಹ ಸಂಸ್ಕೃತಿಯ ಬೆಳವಣಿಗೆಯ ಅಗತ್ಯವಿದೆ. ಗುಣಧರನಂದಿ ಮಾರ್ಗದರ್ಶನದಲ್ಲಿ ವರೂರು ಕ್ಷೇತ್ರ ಬೆಳೆದಿದೆ. ಸಮಾನತೆ, ಸಹಬಾಳ್ವೆಗೆ ಇಂತಹ ಕ್ಷೇತ್ರಗಳು ವೇದಿಕೆಗಳಾಗಿವೆ.
ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿರೋದಕ್ಕೆ ಖುಷಿಯಾಗ್ತಿದೆ. ಇಂತಹ ಕಾರ್ಯಕ್ರಮಕ್ಕೆ ಬರಲು ಕಾರಣರಾದ ಪ್ರಹ್ಲಾದ್ ಜೋಶಿ ಅವರಿಗೆ ಧನ್ಯವಾದ ಎಂದು ಜಗದೀಪ್​ ಧನಕರ್​ ಅವರು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments