Tuesday, September 16, 2025
HomeUncategorizedಧಾರವಾಡ ಜಿಲ್ಲಾ ಪಂಚಾಯತ್​ ನಾಲ್ಕು ಸದಸ್ಯರು ಅನರ್ಹ

ಧಾರವಾಡ ಜಿಲ್ಲಾ ಪಂಚಾಯತ್​ ನಾಲ್ಕು ಸದಸ್ಯರು ಅನರ್ಹ

ಧಾರವಾಡ :  ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಧಾರವಾಡ ಜಿಲ್ಲಾ ಪಂಚಾಯತಿಯ ಅಧ್ಯಕ್ಷರ ವಿರುದ್ದದ ಅವಿಶ್ವಾಸ ನಿರ್ಣಯಕ್ಕೆ ಬಿಜೆಪಿಗೆ ಜಯ ಸಿಕ್ಕಿದೆ. ಬಿಜೆಪಿ ತೆಕ್ಕೆಯಲ್ಲಿದ್ದ ಧಾರವಾಡ ಜಿಲ್ಲಾ ಪಂಚಾಯತಿಯನ್ನು ಶತಾಯಗತಾಯ ತಮ್ಮ ತೆಕ್ಕೆಗೆ ಹಾಕಿಕೊಳ್ಳಬೇಕೆಂಬ ಹಠಕ್ಕೆ ಬಿದ್ದ ಕಾಂಗ್ರೇಸ , ನಾಲ್ವರು ಬಿಜೆಪಿ ಸದಸ್ಯರನ್ನು ಹೈಜಾಕ್ ಮಾಡಿತ್ತು. ಅಂದಿನ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಚೈತ್ರಾ ಶಿರೂರರನ್ನು ಖುರ್ಚಿಯಿಂದ ಕೆಳಗಿಳಿಸಲು ಕಾಂಗ್ರೇಸ ಪಕ್ಷ ಆಪರೇಶನ ನಡೆಸಿತ್ತು. ಅಂದು ಬಿಜೆಪಿ ಸದಸ್ಯರಾಗಿದ್ದ ಜ್ಯೋತಿ ಬೆಂತೂರ, ಅಣ್ಣಪ್ಪ ದೇಸಾಯಿ, ರತ್ನಾ ಪಾಟೀಲ, ಮಂಜವ್ವ ಹರಿಜನ ಎಂಬ ನಾಲ್ವರು ಚೈತ್ರಾ ಶಿರೂರ ವಿರುದ್ದ ಅವಿಶ್ವಾಸ ನಿರ್ಣಯದ ಪರವಾಗಿ ಮತ ಚಲಾಯಿಸಿದ್ದರು. ಇದರಿಂದಾಗಿ ಚೈತ್ರಾ ಶಿರೂರ ಅವಿಶ್ವಾಸ ನಿರ್ಣಯದಲ್ಲಿ ಸೋಲಬೇಕಾಯಿತು. ಬಿಜೆಪಿಗೆ ಅದರಲ್ಲೂ ಮಾಜಿ ಮುಖ್ಯಮಂತ್ರಿ ಮತ್ತು ಈಗಿನ ಕೈಗಾರಿಕಾ ಸಚಿವ ಜಗದೀಶ ಶೆಟ್ಟರರಿಗೆ ಹಾಗೂ ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರಿಗೆ ತವರು ಕ್ಷೇತ್ರದಲ್ಲಿಯೇ ಮುಖಭಂಗವಾಗಿತ್ತು. ವಿಪ್ ಉಲ್ಲಂಘಿಸಿ ಕಾಂಗ್ರೇಸ ಪರ ಮತಚಲಾಯಿಸಿದ್ದ ಬಿಜೆಪಿಯ ನಾಲ್ವರು ಜಿ ಪಂ ಸದಸ್ಯರನ್ನು ಅನರ್ಹಗೊಳಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ಫೆಬ್ರುವರಿ 5 , 2019 ರಲ್ಲಿ ನಡೆದ ಅವಿಶ್ವಾಸ ನಿರ್ಣಯದ ಬಳಿಕ ಕಾಂಗ್ರೇಸ್ಸಿನ ವಿಜಯಲಕ್ಷ್ಮೀ ಪಾಟೀಲ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಸಧ್ಯ ವಾದ ವಿವಾದದ ಬಳಿಕ ನಾಲ್ವರು ಸದಸ್ಯರನ್ನು ರಾಜ್ಯ ಚುನಾವಣಾ ಆಯೋಗ ಅನರ್ಹಗೊಳಿಸಿ ಆದೇಶ ಹೊರಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments