Wednesday, September 10, 2025
HomeUncategorizedಇಬ್ರಾಹಿಂ ನನ್ನ ಉಚ್ಚಾಟನೆಯಾದರೂ ಮಾಡಲಿ, ಏನಾದರೂ ಮಾಡಲಿ : ಕುಮಾರಸ್ವಾಮಿ ಕೆಂಡಾಮಂಡಲ

ಇಬ್ರಾಹಿಂ ನನ್ನ ಉಚ್ಚಾಟನೆಯಾದರೂ ಮಾಡಲಿ, ಏನಾದರೂ ಮಾಡಲಿ : ಕುಮಾರಸ್ವಾಮಿ ಕೆಂಡಾಮಂಡಲ

ಬೆಂಗಳೂರು : ಬಿಜೆಪಿ ಸೋಲಿಸಲು ನಾವು I.N.D.I.Aಗೆ ಬೆಂಬಲ ಕೊಡುತ್ತೇವೆ ಎಂದಿರುವ ಜೆಡಿಎಸ್​ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಕೆಂಡಾಮಂಡಲ ಆಗಿದ್ದಾರೆ.

ಬೆಂಗಳೂರಿನ ಜೆ.ಪಿ ನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ರಾಹಿಂ ಅವರು ಫ್ರೀ ಇದ್ದಾರೆ, ಅವರು ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಕುಟುಕಿದ್ದಾರೆ.

ಅವರೇ ಒರಿಜಿನಲ್ ಅಂತ ಬೋರ್ಡ್ ಹಾಕಿಕೊಳ್ಳಲಿ. ಅವರೇ ಒರಿಜಿನಲ್ ಅಂತ ಬರೆದುಕೊಳ್ಳಲಿ. ಅವರು ನನ್ನನ್ನು ಉಚ್ಚಾಟನೆಯಾದರೂ ಮಾಡಲಿ, ಏನು ಬೇಕಾದ್ರು ಮಾಡಿಕೋಳ್ಳಲಿ. ಅವರಿಗೆ ಬಿಟ್ಟಿದ್ದು. ದಯವಿಟ್ಟು ಇಂತಾ ಸಿಲ್ಲಿ ವಿಚಾರಕ್ಕೆ ಬರಬೇಡಿ ಎಂದು ಟಾಂಗ್ ಕೊಟ್ಟಿದ್ದಾರೆ.

ನೀವು ಯಾಕೆ ವರಿ ಮಾಡ್ಕೊತೀರಿ

ನಮಗೆ ಏನು ಮಾಡಬೇಕೊ, ಸರಿ ಮಾಡ್ತೀವಿ. ನೀವು ತಲೆಕೆಡಿಸಿಕೊಂಡು ಬಂದಿದ್ದೀರಾ. ಅವರು ಫ್ರೀ ಇದ್ದಾರೆ ಮಾತಾಡ್ಕೊಳ್ಳಿ. ನಮ್ಮ ಪಕ್ಷದಲ್ಲಿ ಇರುವ ಹಿರಿಯರು ತೀರ್ಮಾನ ತೆಗೆದುಕೊಳ್ತಾರೆ. ಅದಕ್ಕೆ ನಾವು ಬದ್ಧರಿದ್ದೇವೆ. ನೀವು ಯಾಕೆ ವರಿ ಮಾಡ್ಕೊತೀರಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments