Sunday, August 24, 2025
Google search engine
HomeUncategorizedಸರಳವೂ ಅಲ್ಲ, ಅದ್ದೂರಿಯೂ ಅಲ್ಲ, ಸಾಂಪ್ರದಾಯಿಕ ದಸರಾ : ಸಚಿವ ಮಹದೇವಪ್ಪ

ಸರಳವೂ ಅಲ್ಲ, ಅದ್ದೂರಿಯೂ ಅಲ್ಲ, ಸಾಂಪ್ರದಾಯಿಕ ದಸರಾ : ಸಚಿವ ಮಹದೇವಪ್ಪ

ಮೈಸೂರು : ಅದ್ದೂರಿ ದಸರಾಗೆ ಸಿಎಂ ಸಿದ್ದರಾಮಯ್ಯ ತಾತ್ವಿಕ ಒಪ್ಪಿಗೆ ನೀಡಿದ್ದರು. ಸರಳವೂ ಅಲ್ಲ, ಅದ್ದೂರಿಯೂ ಅಲ್ಲ, ಸಾಂಪ್ರದಾಯಿಕ ದಸರಾ. ಸಾಂಪ್ರದಾಯಿಕ ದಸರೆಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಹೇಳಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರುಮ, ಇನ್ನು 20 ರಿಂದ 23 ತಾಲ್ಲೂಕುಗಳು ಬರದ ಅಡಿಯಲ್ಲಿ ಬರಬಹುದು. ಇಂತಹ ಸಂದರ್ಭದಲ್ಲಿ ಅದ್ದೂರಿ ದಸರಾ ಸೂಕ್ತ ಅಲ್ಲ. ಸಾಂಪ್ರದಾಯಿಕ ದಸರಾ ಹಿನ್ನೆಲೆಯೇ ಬೇರೆ, ಈಗ ಆಗುತ್ತಿರುವುದೇ ಬೇರೆ ಎಂದರು.

ಕಲೆ, ಕ್ರೀಡೆ, ಸಾಹಿತ್ಯ ಇತರೆ ಚಟುವಟಿಕೆ ಕಡಿಮೆಯಾಗುತ್ತಿದೆ. ಅದಕ್ಕೆ ಜೀವ ನೀಡವ ಕೆಲಸ ಮಾಡಬಹುದು. ಎಲ್ಲಾ‌ ಕಾರ್ಯಕ್ರಮಗಳು ಇರಲಿವೆ. ಆದರೆ, ದುಂದು ವೆಚ್ಚಕ್ಕೆ ಬ್ರೇಕ್ ಹಾಕಲಾಗುವುದು. ಪ್ರಾಯೋಜಕತ್ವಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು. ದೀಪಾಲಂಕಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದರು.

ಯುವ ದಸರಾ ಕೂಡ ಸರಳ

ಅನಗತ್ಯ ಕಾರ್ಯಕ್ರಮಗಳಿಗೆ ಕತ್ತರಿ ಹಾಕಲಾಗುವುದು. ದುಂದು ವೆಚ್ಚಕ್ಕೆ ಕಡಿವಾಣ ಹಾಕಲಾಗುವುದು. ಯುವ ದಸರಾವನ್ನು ಕೂಡ ಅದ್ದೂರಿಯಾಗಿ ನಡೆಸುವುದಿಲ್ಲ. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುವುದು ಎಂದು ಸಚಿವ ಮಹದೇವಪ್ಪ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments