Thursday, September 11, 2025
HomeUncategorizedನಾವು ಬಿಟ್ಟ ನೀರು ತಲುಪಲು 5 ದಿನ ಬೇಕು : ಡಿ.ಕೆ ಶಿವಕುಮಾರ್

ನಾವು ಬಿಟ್ಟ ನೀರು ತಲುಪಲು 5 ದಿನ ಬೇಕು : ಡಿ.ಕೆ ಶಿವಕುಮಾರ್

ಮೈಸೂರು : ನಾವು ಬಿಟ್ಟ ನೀರು ಬಿಳುಗುಂಡಲು ಮಾಪನ ಕೇಂದ್ರ ತಲುಪಲು 5 ದಿನ ಬೇಕು. ಬೀಗ ಅವರ ಕೈಯಲ್ಲೇ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.

ಕಾವೇರಿ ನೀರು ನಿರ್ವಹಣೆ ಸಮಿತಿ‌ ಸಭೆ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿರುವ ಅವರು, 5 ಸಾವಿರ ಕ್ಯೂಸೆಕ್ ನೀರು ಶಿಫಾರಸ್ಸು ಮಾಡಿದ್ದಾರೆ. ಇದೇ ಅಂತಿಮವಲ್ಲ ಎಂದರು.

ನಾಳೆ ನಮ್ಮ ಮನವಿಯನ್ನು ಸುಪ್ರೀ ಕೋರ್ಟ್ ಮುಂದೆ ಮಂಡಿಸುತ್ತೇವೆ. ಕೋರ್ಟ್ ನೀಡುವ ತೀರ್ಪಿನ ಅನುಸಾರ ಕ್ರಮ ತೆಗೆದುಕೊಳ್ಳುತ್ತೇವೆ. ನಮ್ಮ ರೈತರ ಹಿತರಕ್ಷಣೆ ಮುಖ್ಯ. ಈ ವಿವಾದ ಬಗೆಹರಿಯುವುದು ಅಷ್ಟೆ ಮುಖ್ಯ. ಎಷ್ಟು ನೀರು ಕೊಡುತ್ತೇವೆ ಎಂಬುದರಲ್ಲಿ ಗೊಂದಲ ಇಲ್ಲ‌ ಎಂದು ತಿಳಿಸಿದರು.

ನಿಖಿಲ್‌ ಭವಿಷ್ಯ ಚೆನ್ನಾಗಿರಲಿ

ಐದು ವರ್ಷ ಸಿನಿಮಾದಲ್ಲಿರಲಿ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರ ಕುಟುಂಬದ ವಿಚಾರ ನಾನು ಮಾತನಾಡಲ್ಲ. ನಿಖಿಲ್ ಕುಮಾರಸ್ವಾಮಿ ನಮ್ಮ ಹುಡುಗ ಅವನಿಗೆ ಒಳ್ಳೆಯದಾಗಲಿ. ನಿಖಿಲ್‌ ಕುಮಾರಸ್ವಾಮಿ ಭವಿಷ್ಯ ಚೆನ್ನಾಗಿರಲಿ ಎಂದು ಶುಭ ಹಾರೈಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments