Sunday, August 24, 2025
Google search engine
HomeUncategorizedಬಡವರ 'ಹೊಟ್ಟೆ ಮೇಲೆ ಬರೆ' ಎಳೆದ 'ಬಿಜೆಪಿ'ಯನ್ನ ಕಿತ್ತೊಗೆಯೋಣ : ಶಾಸಕ ಆನಂದ್ ನ್ಯಾಮಗೌಡ

ಬಡವರ ‘ಹೊಟ್ಟೆ ಮೇಲೆ ಬರೆ’ ಎಳೆದ ‘ಬಿಜೆಪಿ’ಯನ್ನ ಕಿತ್ತೊಗೆಯೋಣ : ಶಾಸಕ ಆನಂದ್ ನ್ಯಾಮಗೌಡ

ಬೆಂಗಳೂರು : ಬಾಗಲಕೋಟೆಯ ಜಮಖಂಡಿ ವಿಧಾನಸಭಾ ಮತಕ್ಷೇತ್ರದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ನ್ಯಾಮಗೌಡ ಗ್ರಾಮೀಣ ಭಾಗದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.

ಜಮಖಂಡಿ ಮತಕ್ಷೇತ್ರದ ಪ್ರವಾಹ ಬಾಧಿತ ಗ್ರಾಮವಾದ ಕಂಕಣವಾಡಿಯಲ್ಲಿ ಶಾಸಕ ಆನಂದ್ ನ್ಯಾಮಗೌಡರು ಪ್ರಚಾರ ನಡೆಸಿದರು. ಗ್ರಾಮದ ಮನೆ-ಮನೆಗೆ ಭೇಟಿ ನೀಡಿ ಶಾಸಕ ಆನಂದ್ ನ್ಯಾಮಗೌಡ ಮತಯಾಚನೆ ಮಾಡಿದರು.

ಇದೇ ವೇಳೆ ಮಾತನಾಡಿದ ಅವರು, ಕೃಷ್ಣಾನದಿ ಪ್ರವಾಹ ಬಂದ ಸಮಯದಲ್ಲಿ ನನ್ನ ಮತಕ್ಷೇತ್ರದ ಸಂತ್ರಸ್ತರ ಕಷ್ಟದಲ್ಲಿ ಭಾಗಿಯಾಗಿದ್ದೇನೆ. ಸದನದಲ್ಲಿ ಸಂತ್ರಸ್ತರ ಸಮಸ್ಯೆಗಳ ಕುರಿತು ಧ್ವನಿ ಎತ್ತಿದರೂ ಸೂಕ್ತ ಪರಿಹಾರ ಸಿಗಲಿಲ್ಲ ಎಂದು ಶಾಸಕ ಆನಂದ್ ನ್ಯಾಮಗೌಡ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ : ರಾಹುಲ್ ಗಾಂಧಿ ಆಗಮನದಿಂದ ‘ಕಾಂಗ್ರೆಸ್ಸಿಗರಿಗೆ ಚೈತನ್ಯ’ : ಆನಂದ ನ್ಯಾಮಗೌಡ

ಜಮಖಂಡಿಯಿಂದ ಬೆಳಗಾವಿವರೆಗೆ ನನ್ನ ಕ್ಷೇತ್ರದ ಪ್ರವಾಹ ಸಂತ್ರಸ್ತರ ಪರಿಹಾರಕ್ಕಾಗಿ ಪಾದಯಾತ್ರೆ ಮಾಡಿ ಸರ್ಕಾರದ ಗಮನ ಸೆಳೆದಿದ್ದೇನೆ. ಬಡವರ ಹೊಟ್ಟೆ ಮೇಲೆ ಬರೆ ಎಳೆದ ಬಿಜೆಪಿ ಸರ್ಕಾರ ಕಿತ್ತೊಗೆಯೋಣ. ಮತದಾರ ಬಂಧುಗಳು ಅಭಿವೃದ್ಧಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಕ್ಷೇತ್ರದಲ್ಲಿ ಆನಂದ್ ನ್ಯಾಮಗೌಡ ಸಮ್ಮುಖದಲ್ಲಿ ಅನ್ಯ ಪಕ್ಷಗಳ ನಾಯಕರು, ಕಾರ್ಯಕರ್ತರು ಕಾಂಗ್ರೇಸ್ ಸಿದ್ದಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments