Tuesday, September 2, 2025
HomeUncategorizedನಾನು ಕೈಗೆ ಹಾಕಿರುವುದು ಬಳೆಯಲ್ಲ - ಅಖಾಡಕ್ಕೆ ಇಳಿದ 'ಪೈಲ್ವಾನ್​' ಸುದೀಪ್..!

ನಾನು ಕೈಗೆ ಹಾಕಿರುವುದು ಬಳೆಯಲ್ಲ – ಅಖಾಡಕ್ಕೆ ಇಳಿದ ‘ಪೈಲ್ವಾನ್​’ ಸುದೀಪ್..!

‘ಪೈಲ್ವಾನ್​’ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ನಟರಾದ ಸುದೀಪ್ ಮತ್ತು ದರ್ಶನ್​ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾ ವಾರ್ ಆರಂಭವಾಗಿದ್ದು, ‘ಪೈಲ್ವಾನ್​’ ಪೈರಸಿ ಆರೋಪದಡಿಯಲ್ಲಿ ರಾಕೇಶ್ ಅಲಿಯಾಸ್ ರಾಕೇಶ್ ವಿರಾಟ್ ಎಂಬಾತನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದರು. ನಿನ್ನೆ ಬಂಧಿತನಾಗಿರುವ ರಾಕೇಶ್ ದರ್ಶನ್ ಅಭಿಮಾನಿ ಎಂದು ಹೇಳಲಾಗ್ತಿದೆ.
ಇನ್ನು ಈ ಪೈರಸಿ ವಿಚಾರ ತಾರರಕ್ಕೇರಿದಾಗ ದರ್ಶನ್ ತನ್ನ ಅಭಿಮಾನಿಗಳ ಸುದ್ದಿಗೆ ಯಾರೂ ಬರ್ಬೇಡಿ ಅಂತ ವಾರ್ನ್​ ಮಾಡುವ ರೀತಿಯಲ್ಲಿ ಟ್ವೀಟ್ ಮಾಡಿದ್ದರು. ಅದರ ಬೆನ್ನಲ್ಲೇ ಸುದೀಪ್ ಸುಧೀರ್ಘ ಪತ್ರ ಮುಖೇನ ಪೈಲ್ವಾನ್ ಪೈರಸಿ ವಿವಾದದ ಬಗ್ಗೆ ಚಾಟಿ ಬೀಸಿದ್ದರು. ಇದೀಗ ಸುದೀಪ್ ಪೈಲ್ವಾನ್ ವಿಚಾರಕ್ಕೆ ಸಂಬಂಧಪಟ್ಟಂತೆ ಅಖಾಡಕ್ಕೆ ಇಳಿದಿದ್ದಾರೆ. ನಾನಿನ್ನು ಸುಮ್ಮನೆ ಕುಳಿತುಕೊಳ್ಳಲ್ಲ ಅಂತ ಟ್ವೀಟ್​​​ನಲ್ಲಿ ಕಿಚ್ಚೆಬ್ಬಿಸಿದ್ದಾರೆ ಕಿಚ್ಚ..!
ಹೌದು… ‘ಪೈಲ್ವಾನ್​’ ಪೈರಸಿ ವಿಚಾರಕ್ಕೆ ಸಂಬಂಧಪಟ್ಟಂತೆ ರಾಕೇಶ್ ಎಂಬ ವ್ಯಕ್ತಿ ನಿನ್ನೆ ಅರೆಸ್ಟ್ ಆಗುತ್ತಿದ್ದಂತೆ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್​ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ”ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನುಗೊತಿಲ್ಲ. ನನ್ನ ಮೌನ, ನನ್ನ ತಾಳ್ಮೆ, ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ,ಇನ್ನು ಕೆಲವು ದಿನಗಳು ಮಾತ್ರ.” ಅಂತ ಸುದೀಪ್ ಟ್ವೀಟ್​ ಮೂಲಕ ಪೈರಸಿ ಪಾಪಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments