Tuesday, September 16, 2025
HomeUncategorizedತಿಮ್ಮಪ್ಪನಿಗೆ ದಿನದ ಮೊದಲ ಪೂಜೆ ಸಲ್ಲಿಸಿದ ಸಿಎಂ ಯಡಿಯೂರಪ್ಪ

ತಿಮ್ಮಪ್ಪನಿಗೆ ದಿನದ ಮೊದಲ ಪೂಜೆ ಸಲ್ಲಿಸಿದ ಸಿಎಂ ಯಡಿಯೂರಪ್ಪ

ಇಂದು ಮುಂಜಾನೆ ಮುಖ್ಯಮಂತ್ರಿ ಯಡಿಯೂರಪ್ಪನವರು ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನಿಗೆ ದಿನದ ಮೊದಲ ಪೂಜೆ ಸಲ್ಲಿಸಿದರು.

ನಿನ್ನೆ ರಾತ್ರಿ ಹೆಚ್​.ಎ.ಎಲ್​ ವಿಮಾನ ನಿಲ್ದಾನದ ಮೂಲಕ ತಿರುಪತಿಗೆ ತೆರಳಿದ್ದ ಯಡಿಯೂರಪ್ಪನವರು ಇಂದು ಬೆಳಗಿನ ಜಾವ ತಿಮ್ಮಪ್ಪನ ದಿನದ ಮೊದಲ ಪೂಜೆಯಲ್ಲಿ ಭಾಗಿಯಾದರು. ಅಮವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿದ ಯಡಿಯೂರಪ್ಪನವರಿಗೆ ಸಿಎಂ ನೂತನ ರಾಜಕೀಯ ಕಾರ್ಯದರ್ಶಿ ಆಗಿ ನೇಮಕಗೊಂಡಿರುವ ಎಸ್.ಆರ್.ವಿಶ್ವನಾಥ್ ಸಾಥ್​ ನೀಡಿದರು.

ತಿಮ್ಮಪ್ಪನ ದರ್ಶನದ ಬಳಿಕ ಬಿಎಸ್ವೈ ಇಂದು ಬೆಂಗಳೂರಿನ ಹೆಚ್‌ಎಎಲ್‌ ಏರ್‌ಪೋರ್ಟ್‌ಗೆ ಆಗಮಿಸಲಿದ್ದು, ಇಲ್ಲಿಂದ ಉತ್ತರ ಕನ್ನಡ, ಹಾವೇರಿ ಜಿಲ್ಲೆಗಳಿಗೆ ತೆರಳಲಿದ್ದಾರೆ. ಈ ಎರಡೂ ಜಿಲ್ಲೆಯಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿ  ಬಗ್ಗೆ  ಸಿಎಂ ಪರಿಶೀಲನೆ ನಡೆಸಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments