ಬೆಳಗಾವಿ: ಬೃಹತ್ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿದ್ದರೂ ಕೂಡ ಅದೇ ರಸ್ತೆಯಲ್ಲಿ ತನ್ನ ಲಾರಿಯನ್ನು ಚಲಾಯಿಸಿದ ಲಾರಿ ಡ್ರೈವರ್ಗೆ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಬೆವರಿಳಿಸಿದ್ದಾರೆ.
ಭೀಕರ ಪ್ರವಾಹದಿಂದ ಬೆಳಗಾವಿ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆ, ಸೇತುವೆಗಳು ಹಾನಿಗೀಡಾಗಿವೆ. ಗೋವಾವನ್ನು ಸಂಪರ್ಕಿಸುವ ಜಾಂಬೋಟಿ ರಸ್ತೆಯಲ್ಲಿ ಸೇತುವೆ ಹಾಳಾಗಿ ಸಂಚಾರಕ್ಕೆ ಅಡೆತಡೆಯಾಗಿದೆ. ಹೀಗಾಗಿ ಬೃಹತ್ ವಾಹನಗಳು ಈ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಡಳಿತ ನಿಷೇಧ ಹೇರಿದೆ. ಹೀಗಿದ್ದರೂ ಕೂಡ ಆ ರಸ್ತೆಯಲ್ಲಿ ಚಾಲಕನೋರ್ವ ತನ್ನ ಲಾರಿ ಚಲಾಯಿಸಿದ್ದಾನೆ. ಇದರಿಂದ ಕೋಪಗೊಂಡ ಶಾಸಕಿ ಅಂಜಲಿ ನಿಂಬಾಳ್ಕರ್ರವರು ಲಾರಿಯನ್ನು ರಸ್ತೆಯ ಮಧ್ಯೆ ನಿಲ್ಲಿಸಿ, ವಾಪಾಸ್ ಹೋಗು ಇಲ್ಲದಿದ್ರೆ ಲಾರಿ ಪಂಚರ್ ಮಾಡ್ತೀನಿ ಅಂತ ಕ್ಲಾಸ್ ತಗೊಂಡ್ರು.
https://www.facebook.com/powertvnews/videos/1095323060856659/?eid=ARDQKwP1dsqALIzj2MrcKu-vWegzWhMZOM30hxvugqyDXgckfLtWVnKSy7qeNziKKs-TcZNGhUUHvYcG