Tuesday, September 9, 2025
HomeUncategorized'ವಿಶ್ವಾಸ' ಗೆದ್ದ ಸಿಎಂ ಬಿಎಸ್​ವೈ

‘ವಿಶ್ವಾಸ’ ಗೆದ್ದ ಸಿಎಂ ಬಿಎಸ್​ವೈ

ಬೆಂಗಳೂರು : ನೂತನ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪನವರು ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶುಕ್ರವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿಎಸ್​ವೈ ಇಂದು ವಿಶ್ವಾಸ ಮತ ಸಾಬೀತು ಪಡಿಸ್ತೀನಿ ಅಂತ ಹೇಳಿದ್ದರು. ನಿರೀಕ್ಷೆಯಂತೆಯೇ ಸಿಎಂ ‘ವಿಶ್ವಾಸ’ದಲ್ಲಿ ಗೆದ್ದಿದ್ದಾರೆ. ವಿಶ್ವಾಸಮತ ಧ್ವನಿಮತದಿಂದ ಅಂಗೀಕಾರವಾಗಿದ್ದು, ಸಿಎಂ ವಿಶ್ವಾಸಮತದಲ್ಲಿ ಗೆದ್ದಿದ್ದಾರೆ ಅಂತ ಸ್ಪೀಕರ್ ರಮೇಶ್ ಕುಮಾರ್ ಘೋಷಣೆ ಮಾಡಿದರು.
ಮತಕ್ಕೆ ಹಾಕುವುದು ಅಗತ್ಯವಿಲ್ಲ ಅಂತ ಸ್ಪೀಕರ್ ಭಾವಿಸಿದರು. ವಿಶ್ವಾಸಮತದ ಬಳಿಕ ಸಿಎಂ ಹಣಕಾಸು ಬಿಲ್ ಮಂಡನೆ ಮಾಡಿದರು. ಸದನದಲ್ಲಿ ಹಣಕಾಸು ಮಸೂದೆ ಅಂಗೀಕಾರವಾಯಿತು.
ವಿಶ್ವಾಸ ಮತಕ್ಕೂ ಮುನ್ನ ಮಾತನಾಡಿದ ಅವರು, ಹೋರಾಟದಿಂದಲೇ ಬಂದವು ನಾನು. ನಿಮ್ಮೆಲ್ಲರ ವಿಶ್ವಾಸಕ್ಕೆ ಧಕ್ಕೆ ಬರದಂತೆ, ನಾಡಿನ ಜನರ ಆಶಯಕ್ಕೆ ತಕ್ಕಂತೆ ಆಡಳಿತ ನಡೆಸುವೆ. ಎಂದೂ ದ್ವೇಷದ ರಾಜಕಾರಣ ಮಾಡಲ್ಲ ಅಂತ ಹೇಳಿದ್ರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments