Saturday, September 13, 2025
HomeUncategorizedನಿಖಿಲ್ ಕುಮಾರಸ್ವಾಮಿ ಬಗ್ಗೆ ಎಸ್.ಎಂ ಕೃಷ್ಣ ಹೀಗಂದ್ರಾ..!?

ನಿಖಿಲ್ ಕುಮಾರಸ್ವಾಮಿ ಬಗ್ಗೆ ಎಸ್.ಎಂ ಕೃಷ್ಣ ಹೀಗಂದ್ರಾ..!?

ಮಂಡ್ಯ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ, ನಟ ನಿಖಿಲ್ ಕುಮಾರಸ್ವಾಮಿ ಸುಮಲತಾ ಅಂಬರೀಶ್ ಅವರ ಗೆಲುವಿಗೆ ಹಾಗೂ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರ ಚೊಚ್ಚಲ ಸಿನಿಮಾ ‘ಅಮರ್​’ಗೆ ಟ್ವೀಟ್ ಮೂಲಕ ಶುಭಾಶಯ ಕೋರಿದ್ದರು. ನಿಖಿಲ್ ನಡೆಯನ್ನು ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಸ್​.ಎಂ ಕೃಷ್ಣ ಪ್ರಶಂಸಿಸಿದ್ದಾರೆ.
‘’ನಿಖಿಲ್ ನಿಮ್ಮ ಸ್ಟೇಟ್ಮೆಂಟ್ ನಿಂದ ನಾನು ಪ್ರಭಾವಿತನಾಗಿದ್ದೇನೆ, ನಿಮ್ಮ ಮಾತು ಪ್ರಬುದ್ಧತೆಯಿಂದ ಕೂಡಿದೆ, ರಾಜಕೀಯದಲ್ಲಿ ಚುನಾವಣೆಗಳು ಬಂದು ಹೋಗುತ್ತವೆ ಬದುಕು ರಾಜಕಾರಣಕ್ಕಿಂತಲೂ ದೊಡ್ಡದು. ಇದೇ ರೀತಿ ಮುಂದುವರೆದ್ರೆ ಖಂಡಿತ ಜಯ ನಿಮ್ಮದಾಗುತ್ತೆ’’ ಅಂತ ಎಸ್​.ಎಂ ಕೃಷ್ಣ ಟ್ವೀಟ್ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments