Saturday, September 13, 2025
HomeUncategorizedಮೋದಿ ಸಂಪುಟ ಸೇರಲಿರೋ ಘಟಾನುಘಟಿ ನಾಯಕರು ಯಾರ‍್ಯಾರು?

ಮೋದಿ ಸಂಪುಟ ಸೇರಲಿರೋ ಘಟಾನುಘಟಿ ನಾಯಕರು ಯಾರ‍್ಯಾರು?

ನರೇಂದ್ರ ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿದೆ. ಮೋದಿ ಸಂಪುಟದಲ್ಲಿ ಯಾರಿಗೆಲ್ಲಾ ಸಿಗುತ್ತೆ ಚಾನ್ಸ್​​ ಅನ್ನೋ ಕುತೂಹಲಕ್ಕೆ ತಕ್ಕಮಟ್ಟಿಗೆ ಬ್ರೇಕ್ ಬಿದ್ದಿದೆ.
ಕರ್ನಾಟಕದಿಂದ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಸದಾನಂದ ಗೌಡ, ಧಾರವಾಡ ಸಂಸದ ಪ್ರಹ್ಲಾದ್​ ಜೋಶಿ, ಬೆಳಗಾವಿ ಸಂಸದ ಸುರೇಶ್ ಅಂಗಡಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸೋದು ಪಕ್ಕಾ ಆಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯೂ ಮೋದಿ ಸಂಪುಟದಲ್ಲಿ ಸಚಿವರಾಗಲಿದ್ದಾರೆ.
ಇನ್ನುಳಿದಂತೆ ಅರ್ಜುನ್ ರಾಮ್‌ ಮೆಘ್ವಾಲ್, ಜಿತೇಂದ್ರ ಸಿಂಗ್ ಪಿಯೂಷ್‌ ಗೋಯಲ್, ಕಿಶನ್ ರೆಡ್ಡಿ, ಆರ್‌ಪಿಐನ ರಾಮದಾಸ್‌ ಅಠವಾಳೆಗೆ ಚಾನ್ಸ್‌ . ಎಲ್‌ಜೆಪಿಯ ರಾಮ್‌ ವಿಲಾಸ್‌ ಪಾಸ್ವಾನ್ ಲಕ್ . ಧರ್ಮೇಂದ್ರ ಪ್ರಧಾನ್, ಪ್ರಕಾಶ್ ಜಾವ್ಡೇಕರ್, ರವಿಶಂಕರ್ ಪ್ರಸಾದ್, ಸ್ಮೃತಿ ಇರಾನಿ. ರಾಜನಾಥ್ ಸಿಂಗ್, ಡಾ.ಜಿತೇಂದ್ರ ಸಿಂಗ್ . ಹರ್ ಸಿಮ್ರತ್ ಕೌರ್, ಬಾಬುಲ್ ಸುಪ್ರಿಯೋ, ಮುಕ್ತಾರ್ ಅಬ್ಬಾಸ್ ನಖ್ವಿ, ಕೃಷ್ಣಲಾಲ್ ಜೋಷಿ, ಕಿರಣ್ ರಿಜಿಜು, ನಿತ್ಯನಂದ ರಾಯ್‌, ಪುರುಷೋತ್ತಮ್ ರೂಪಾಲ್​, ನರೇಂದ್ರಸಿಂಗ್ ತೋಮರ್, ಸಾಧ್ವಿ ನಿರಂಜನ್ ಜ್ಯೋತಿ, ತಾವರ್‌ ಚಂದ್‌ ಗೆಹ್ಲೋಟ್, ನಿತಿನ್ ಗಡ್ಕರಿ, ಕಿಶನ್‌ ಪಾಲ್‌ ಗುರ್ಜರ್, ಸಂತೋಷ್‌ ಗಂಗ್ವಾರ್ ಮೋದಿ ಸಂಪುಟ ಸೇರಲಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments