Saturday, September 13, 2025
HomeUncategorizedಕೊಪ್ಪಳದಲ್ಲಿಂದು ಮೈತ್ರಿ ಅಭ್ಯರ್ಥಿ ಪರ ಆಂಧ್ರ ಸಿಎಂ ಪ್ರಚಾರ

ಕೊಪ್ಪಳದಲ್ಲಿಂದು ಮೈತ್ರಿ ಅಭ್ಯರ್ಥಿ ಪರ ಆಂಧ್ರ ಸಿಎಂ ಪ್ರಚಾರ

ಕೊಪ್ಪಳ: ಆಂಧ್ರಪ್ರದೇಶದ ಸಿ.ಎಂ‌ ಚಂದ್ರಬಾಬು ನಾಯ್ಡು ಇಂದು ಕೊಪ್ಪಳಕ್ಕೆ ಆಗಮಿಸಲಿದ್ದು ಮೈತ್ತಿ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಬೃಹತ್ ಸಮಾವೇಶದಲ್ಲಿ ಆಂಧ್ರ ಸಿ.ಎಂ ಭಾಗವಹಿಸಲಿದ್ದು ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಪರ ಮತಯಾಚನೆ‌ ಮಾಡಲಿದ್ದಾರೆ.

ಈಗಾಗಲೇ ಶ್ರಿರಾಮನಗರದ ರಾಜ್ಯ ಹೆದ್ದಾರಿ ಪಕ್ಕದಲ್ಲೆ ಸಮಾವೇಶಕ್ಕೆ ಜಾಗ ಗುರುತಿಸಿದ್ದು ಕಳೆದೆರಡು ದಿನದಿಂದ ಬೃಹತ್ ವೇದಿಕೆ ನಿರ್ಮಾಣ‌ ಕಾರ್ಯ ಭರದಿಂದ ಸಾಗಿದೆ. ಸಮಾವೇಶದಲ್ಲಿ ಸರಿಸುಮಾರು 35 ರಿಂದ 40 ಸಾವಿರ ಜನರು‌ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಿದ್ದು, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಶ್ರಿರಾಮನಗರದಲ್ಲಿ ಆಂಧ್ರ ವಲಸಿಗರು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಆಂಧ್ರ ಸಿ.ಎಂ‌ ಮುಖಾಂತರ ಸ್ಥಳಿಯ ಆಂಧ್ರ ಜನರ ಮತ ಗಳಿಸಲು ಕಾಂಗ್ರೆಸ್​​ ಪ್ಲ್ಯಾನ್ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments