Wednesday, September 10, 2025
HomeUncategorizedಸಿಎಂಗೆ ಮಾಧ್ಯಮಗಳು ಕಾಟ ಕೊಡ್ತಿವೆಯಂತೆ..!

ಸಿಎಂಗೆ ಮಾಧ್ಯಮಗಳು ಕಾಟ ಕೊಡ್ತಿವೆಯಂತೆ..!

ಮಂಗಳೂರು: ಪದೇ ಪದೇ ಮಾಧ್ಯಮಗಳ ಕುರಿತು ತಮ್ಮ ಅಸಮಾಧಾನವನ್ನು ತೋರಿಸುತ್ತಿರುವ ಸಿಎಂ ಹೆಚ್​. ಡಿ. ಕುಮಾರಸ್ವಾಮಿ ಅವರು ಮತ್ತೆ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ. ಮಾಧ್ಯಮಗಳ ಮೇಲೆ ಕೋಪ ವ್ಯಕ್ತಪಡಿಸಿದ ಸಿಎಂ ಅವರು, “ಮಾಧ್ಯಮಗಳು ಕೆಲಸ ಮಾಡಲು ಬಿಡ್ತಿಲ್ಲ. ಕಾಟ ಕೊಡ್ತಿವೆ” ಅಂತ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಸಿಎಂ, “ಮಾಧ್ಯಮಗಳು ನನ್ನ ವಿರುದ್ಧವಾಗಿ ಪ್ರಚಾರ ಕೊಡುತ್ತಾ ಬಂದಿದ್ದಾರೆ. ನನ್ನ ಪ್ರತಿಕ್ರಿಯೆ ವೇಳೆ ನಮ್ಮ ವಿರೋಧಿಗಳನ್ನ ತೋರಿಸುತ್ತೀರಿ. ಇದು ಯಾವ ರೀತಿಯ ಪ್ರಚಾರ..? ನನಗೆ ಯಾರ ಬಗ್ಗೆಯೂ ದ್ವೇಷವಿಲ್ಲ. ಹಾಗಿರುವಾಗ ನಿಮಗೇಕೆ ನನ್ನ ಬಗ್ಗೆ ದ್ವೇಷ” ಅಂತ ಪ್ರಶ್ನಿಸಿದ್ದಾರೆ. “ನೀವು ಕೇಳೋ ಪ್ರಶ್ನೆಗಳಿಗೆ ಅರ್ಥ ಇದೆಯಾ? ನಿಮಗೆ ಸಮಾಧಾನ ಇದೆಯಾ? ನೀವು ತೋರಿಸಿದ್ದನ್ನ ರಿವೈಂಡ್ ಮಾಡಿ ನೋಡಿಕೊಳ್ಳಿ” ಎಂದು ಫುಲ್ ಗರಂ ಆಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments