ಅಹಮದಾಬಾದ್ : ಎಂಟು ರಾಷ್ಟ್ರಗಳ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ ( ಶಾಂಘೈ ಕೋ ಆಪರೇಷನ್ ಆರ್ಗನೈಸೇಷನ್) (ಎಸ್ ಸಿ ಒ) ವಿಶ್ವದ ಎಂಟು ಅದ್ಭುತಗಳಲ್ಲಿ ಗುಜರಾತ್ನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ನೆಲೆಗೊಂಡಿರುವ ‘ಏಕತಾ ಪ್ರತಿಮೆ’ (ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆ) ಯನ್ನು ಸೇರಿಸಿದೆ.
ಈ ಕುರಿತು, ‘ಎಸ್ಸಿಒದ ಎಂಟು ಅದ್ಭುತಗಳು’ ಯೋಜನೆಯಲ್ಲಿ ಏಕತೆಯ ಪ್ರತಿಮೆಯನ್ನು ಸೇರಿಸಲಾಗಿದೆ ಎಂದು ಹೇಳಲು ಸಂತೋಷವಾಗಿದೆ. ಈ ಗೌರವದಿಂದ ಖಂಡಿತ ಹೆಚ್ಚಿನ ಪ್ರವಾಸಿಗರು ಆಕರ್ಷಿತರಾಗುತ್ತಾರೆ’ ಎಂದು ವಿದೇಶಾಂಗ ಸಚಿವ ಎಸ್.ಜಯಶಂಕರ್ ಟ್ವೀಟ್ ಮಾಡಿದ್ದಾರೆ.
ಭಾರತ, ಪಾಕಿಸ್ತಾನ, ಚೀನಾ, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ರಷ್ಯಾ ಮತ್ತು ಉಜ್ಬೇಕಿಸ್ತಾನ್ ಎಸ್ ಸಿ ಒದ ಎಂಟು ರಾಷ್ಟ್ರಗಳು.