ಮಂಗಳೂರು: ಕರಾವಳಿಯಲ್ಲಿ ಕೋಮಿನ ಆಧಾರದ ಮೇಲೆ ಸರಣಿ ಹತ್ಯೆಗಳು ನಡೆಯುತ್ತಿರುವ ಹಿನ್ನಲೆ ಕಾರ್ಯಪ್ರವೃತ್ತರಾಗಿರುವ ಮಂಗಳೂರು ಪೊಲೀಸ್ ಇಲಾಖೆ ಲಾಠಿ ಡ್ರಿಲ್ ನಡೆಸಿದ್ದು. ಅಬ್ದುಲ್ ರಹಿಮಾನ್ ಹತ್ಯೆ ಖಂಡಿಸಿ ಎಸ್ಡಿಪಿಐ ಪ್ರತಿಭಟನೆ ನಡೆಸುವ ಮುನ್ನ ಈ ಡ್ರಿಲ್ ನಡೆಸಲಾಗಿದೆ. ಇದನ್ನೂ ಓದಿ :ಅಣ್ಣಾ ವಿವಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ; ಅಪರಾಧಿಗೆ 30 ವರ್ಷ ಜೈಲು ಶಿಕ್ಷೆ
ಸುಹಾಸ್ ಶೆಟ್ಟಿ ಹತ್ಯೆ ನಡೆದ ಕೆಲವೇ ದಿನಗಳಲ್ಲಿ ಮುಸ್ಲಿಂ ಯುವಕನೊಬ್ಬನ ಹತ್ಯೆಯಾಗಿರುವ ಹಿನ್ನಲೆ ಮಂಗಳೂರಿನಲ್ಲಿ ಅಶಾಂತಿಯ ವಾತವರಣ ನಿರ್ಮಾಣವಾಗಿದೆ. ಅಬ್ದುಲ್ ರೆಹಮಾನ್ ಹತ್ಯೆಯಾದ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದ್ದು. ಮಂಗಳೂರಿನ ಕಮಿಷನರ್, ದಕ್ಷಿಣ ಕನ್ನಡದ ಎಸ್ಪಿ ಸೇರಿದಂತೆ ಪೊಲೀಸ್ ಇಲಾಖೆಯಲ್ಲಿ ಬದಲಾವಣೆಗೆ ಮುಂದಾಗಿದೆ. ಇದನ್ನೂ ಓದಿ :ರಸ್ತೆಗೆ ಬೇಲಿ ಹಾಕಿದ ಭೂಪ; ಸ್ಮಶಾನಕ್ಕೆ ದಾರಿ ಇಲ್ಲದೇ ಹೆಣ ಹೂಳಲು ಪರದಾಟ
ಅಬ್ದುಲ್ ರಹಿಮಾನ್ ಹತ್ಯೆ ಖಂಡಿಸಿ ಎಸ್ಡಿಪಿಐ (SDPI) ಪ್ರತಿಭಟನೆ ನಡೆಸಲು ಸಿದ್ದತೆ ನಡೆಸಿದ್ದು. ಮಂಗಳೂರಿನ ಹೃದಯ ಭಾಗವಾದ ಕ್ಲಾಕ್ ಟವರ್ ಮುಂಭಾಗದಲ್ಲಿ ಎಸ್ಡಿಪಿಐ ಸೇರಿದಂತೆ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಲು ಸಿದ್ದತೆ ನಡೆಸಿವೆ. ಆದರೆ ಅದಕ್ಕೂ ಮುನ್ನ ಕೆಎಸ್ಆರ್ಪಿ ತುಕಡಿ ಕ್ಲಾಕ್ ಟವರ್ ಮುಂಭಾಗ ಲಾಠಿ ಡ್ರಿಲ್ ನಡೆಸಿದ್ದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರ ಸೂಚನೆಯಂತೆ ಡ್ರಿಲ್ ನಡೆಸಲಾಗಿದೆ. ಇದನ್ನೂ ಓದಿ :ಕಲ್ಲಡ್ಕ ಪ್ರಭಾಕರ್ ಮೇಲೆ FIR; ಹಿಂದೂಗಳನ್ನ ಟಾರ್ಗೆಟ್ ಮಾಡಿದ್ದಾರೆ ಎಂದು ರೇಣುಕಚಾರ್ಯ ಆರೋಪ
ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಕೆಎಸ್ಆರ್ಪಿ ಪೊಲೀಸರು ಕ್ಲಾಕ್ ಟವರ್ ಮುಂಭಾಗದಲ್ಲಿ ಲಾಠಿ ಡ್ರಿಲ್ ಕೈಗೊಂಡಿದ್ದು. ಕಿಡಿಗೇಡಿಗಳ ಹೃದಯದಲ್ಲಿ ನಡುಕ ಹುಟ್ಟುವಂತೆ ಡ್ರಿಲ್ ನಡೆಸಲಾಗಿದೆ. ಇನ್ನಾದರೂ ಕರಾವಳಿ ಶಾಂತವಾಗುತ್ತ ಎಂಬುದನ್ನು ಕಾದು ನೋಡಬೇಕಿದೆ.