ಹುಬ್ಬಳ್ಳಿ: ಅಣ್ಣ-ತಮ್ಮಂದಿರ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಬಂದ ತಾಯಿಗೆ ಪಾಪಿ ಮಗನೊಬ್ಬ ಗಾಜಿನಿಂದ ಹೊಟ್ಟೆಗೆ ಇರಿದು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು. ಕೊಲೆಯಾದ ದುರ್ದೈವಿಯನ್ನು ಪದ್ಮಾ ಚಲೂರಿ ಎಂದು ಗುರುತಿಸಲಾಗಿದೆ, ಸ್ವಂತ ತಾಯಿ ಸಾವಿಗೆ ಕಾರಣರಾದ ಮಕ್ಕಳನ್ನು ಲಕ್ಷ್ಮಣ್ ಮತ್ತು ಮಂಜುನಾಥ್ ಎಂದು ಗುರುತಿಸಲಾಗಿದೆ.
ಹುಬ್ಬಳ್ಳಿ ನಗರದ ತೊರವಿಹಕ್ಕಲ್ ಬಡಾವಣೆಯಲ್ಲಿ ಘಟನೆ ನಡೆದಿದ್ದು. ಪದ್ಮಾಳ ಮಕ್ಕಳಾದ ಮಂಜುನಾಥ್ ಮತ್ತು ಲಕ್ಷ್ಮಣ್ ಮನೆಯ ಕೆಳಗೆ ಕಟಿಂಗ್ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಇಬ್ಬರು ಅದರಲ್ಲೇ ಕೆಲಸ ಮಾಡುತ್ತಿದ್ದರು. ಆದರೆ ನಿನ್ನೆ(ಮೇ.29) ಮಂಜುನಾಥ ಮತ್ತು ಲಕ್ಷ್ಮಣ್ ನಡುವೆ ನೂರು ರೂಪಾಯಿ ವಿಚಾರಕ್ಕೆ ಜಗಳ ಆರಂಭವಾಗಿದೆ. ಈ ವಿಷಯವನ್ನ ಕಮರಿಪೇಟೆ ಪೊಲೀಸ್ ಠಾಣೆವರೆಗೂ ತೆಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ :ಪಹಲ್ಗಾಂನಲ್ಲಿ ಬಲಿಯಾದ ಶುಭಂ ದ್ವಿವೇದಿ ಕುಟುಂಬವನ್ನ ಭೇಟಿಯಾದ ಪ್ರಧಾನಿ ಮೋದಿ
ಆದರೆ ನಂತರ ಪೊಲೀಸ್ ಠಾಣೆಯಲ್ಲಿ ಈ ಸಮಸ್ಯೆಯನ್ನ ಮನೆಯಲ್ಲೇ ಬಗೆಹರಿಸಿಕೊಳ್ಳುವುದಾಗಿ ಹೇಳಿ ಮನೆಗೆ ಬಂದಿದ್ದಾರೆ. ಆದರೆ ಮಧ್ಯರಾತ್ರಿ 1 ಗಂಟೆ ಸಮಯಕ್ಕೆ ಮಂಜುನಾಥ್ ಮತ್ತೆ ಲಕ್ಷ್ಮಣ್ ಜೊತೆ ಜಗಳ ಆರಂಭಿಸಿದ್ದು. ಜಗಳ ತಾರಕಕ್ಕೆ ಹೋಗಿದೆ, ಈ ವೇಳೆ ಮಕ್ಕಳ ಜಗಳ ಬಿಡಿಸಲು ಬಂದ ತಾಯಿ ಪದ್ಮಳಾ ಹೊಟ್ಟೆಗೆ ಪಾಪಿ ಪುತ್ರ ಮಂಜುನಾಥ್ ಕಿಟಕಿಗೆ ಅಳವಡಿಸಿದ್ದ ಗಾಜಿನಿಂದ ಇರಿದು ಬಿಟ್ಟಿದ್ದಾನೆ.ಇದನ್ನೂ ಓದಿ :ಐಪಿಎಲ್ ಟಿಕೆಟ್ ಮಾರಾಟ ದಂಧೆ; ಪೊಲೀಸರೆ ಕಿಂಗ್ಪಿನ್, ನಾಲ್ವರು ಬಂಧನ
ರಕ್ತದ ಮಡುವಿನಲ್ಲಿ ಬಿದ್ದಿದ್ದ ಪದ್ಮಾಳನ್ನು ಕೂಡಲೇ ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿತ್ತು. ಆದ್ರೆ ತೀವ್ರ ರಕ್ತಸ್ರಾವವಾಗಿದ್ದರಿಂದ ಪದ್ಮಾ, ಇಂದು ನಸುಕಿನ ಜಾವದಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಪಾಪಿ ಮಂಜುನಾಥ, ಮಹಿಳೆಯೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದನಂತೆ. ಪ್ರತಿನಿತ್ಯ ಕುಡಿದು ಬಂದು ಜಗಳ ಮಾಡುತ್ತಿದ್ದನಂತೆ. ಆದರ ಕಳೆದ ರಾತ್ರಿ ಹೆತ್ತ ತಾಯಿಯ ಉಸಿರನ್ನೇ ನಿಲ್ಲಿಸಿದ್ದಾನೆ.
ಇದನ್ನೂ ಓದಿ :ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ; ಮತ್ತೆ ಉದ್ದಟತನದ ಹೇಳಿಕೆ ನೀಡಿದ ನಟ ಕಮಲ್ ಹಾಸನ್
ಸದ್ಯ ಪದ್ಮಾ ಕೊಲೆಗೆ ಸಂಬಂಧಿಸಿದಂತೆ ಕಮರಿಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸದ್ಯ ಇಬ್ಬರು ಮಕ್ಕಳನ್ನು ಬಂಧಿಸಿದ್ದಾರೆ. ಆದರೆ ಹೆತ್ತ ತಾಯಿಯ ಉಸಿರಾಗಬೇಕಿದ್ದ ಮಕ್ಕಳು, ತಾಯಿಯ ಉಸಿರನ್ನೇ ತಗೆದಿರೋದು ಮಾತ್ರ ದುರಂತವೇ.