Site icon PowerTV

SSLC ಪರೀಕ್ಷೆಯಲ್ಲಿ ಫೇಲ್: ಶಾಲೆ ಮುಂಭಾಗದ ಮರಕ್ಕೆ ನೇಣು ಬಿಗಿದುಕೊಂಡು ಬಾಲಕ ಆತ್ಮಹ*ತ್ಯೆ

ಗದಗ : SSLC ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದಲ್ಲಿ ನಡೆದಿದ್ದು. ಮೃತ ಬಾಲಕನನ್ನು 16 ವರ್ಷದ ರಾಕೇಶ್​ ಮಣ್ಣೋಡ್ದರ್​ ಎಂದು ಗುರುತಿಸಲಾಗಿದೆ.

ಗದಗ ಜಿಲ್ಲೆಯ, ಗಜೇಂದ್ರಗಡ ತಾಲೂಕಿನ, ನರೇಗಲ್ ಪಟ್ಟಣದಲ್ಲಿ ಘಟನೆ ನಡೆದಿದ್ದು. ಮೃತ ರಾಕೇಶ್ ನರೇಗಲ್ ಖಾಸಗಿ ಹೈಸ್ಕೂಲ್​ನಲ್ಲಿ ವ್ಯಾಸಂಗ ಮಾಡುತ್ತಿದ್ದ. ಕ್ರೀಡೆಯಲ್ಲಿ ತುಂಭಾ ಕ್ರಿಯಾಶೀಲನಾಗಿದ್ದ ರಾಕೇಶ್​, ಓದುವುದರಲ್ಲಿ ತೀರಾ ಹಿಂದುಳಿದಿದ್ದ ಎನ್ನಲಾಗಿದೆ. ಓದಿನಲ್ಲಿ ಹಿಂದುಳಿದಿದ್ದ ರಾಕೇಶ್ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ನಾಲ್ಕು ವಿಷಯಗಳಲ್ಲಿ ಫೇಲ್​ ಆಗಿದ್ದನು. ಇದನ್ನೂ ಓದಿ :ಸೂಟ್​ಕೇಸ್​ನಲ್ಲಿ 10 ವರ್ಷ ವಯಸ್ಸಿನ ಅಪರಿಚಿತ ಬಾಲಕಿ ಶವ ಪತ್ತೆ..!

ಫೇಲ್​ ಆಗಿದ್ದಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ರಾಕೇಶ್, ನಿನ್ನೆ(ಮೇ.20) ರಾತ್ರಿ ಮನೆಯಿಂದ ಹೊರ ಹೋಗಿದ್ದು. ಬಸ್​ ನಿಲ್ದಾಣದ ಮುಂಭಾಗದಲ್ಲಿರುವ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ನರೇಗಲ್​ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ರಾಹುಲ್​-ಸೋನಿಯಾಗೆ ED ಶಾಕ್​: 142 ಕೋಟಿ ರೂಪಾಯಿ ಅಕ್ರಮ ಲಾಭ ಪಡೆದಿರುವ ಆರೋಪ

Exit mobile version