Site icon PowerTV

ದರ್ಶನ್​ ಕೊಲೆ ಪ್ರಕರಣದ ವಿಚಾರಣೆ ಮುಂದೂಡಿಕೆ: ದರ್ಶನ್​ ಬಳಿ ಮೊಬೈಲ್​ ನಂಬರ್​ ಪಡೆದ ಪವಿತ್ರಾ

ರೇಣುಕಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನ ನ್ಯಾಯಾಲಯ ಮುಂದೂಡಿದ್ದು. ಜುಲೈ 10ಕ್ಕೆ ಮುಂದಿನ ವಿಚಾರಣೆಯ ದಿನಾಂಕವನ್ನ ನಿಗಧಿಪಡಿಸಿ 57ನೇ ಸಿಸಿಹೆಚ್​ ನ್ಯಾಯಲಯ ಆದೇಶ ಹೊರಡಿಸಿದೆ.

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಅಪರಾಧಿಯಾಗಿರುವ ನಟ ದರ್ಶನ್​ ಸೇರಿದಂತೆ 17 ಜನ ಆರೋಪಿಗಳ ವಿಚಾರಣೆಯನ್ನ ನ್ಯಾಯಾಲಯ ಮುಂದೂಡಿದೆ. ಈಗಾಗಲೇ ಕಾಮಾಕ್ಷಿ ಪಾಳ್ಯ ಪೊಲೀಸರು ಪ್ರಕರಣ ಸಂಬಂಧ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನ ನ್ಯಾಯಾಲಯಕ್ಕೆ ಸಲ್ಲಿಸಿದ್ದು. ಎಫ್​ಎಸ್​ಎಲ್​ ವರದಿ ಸೇರಿದಂತೆ ಕೆಲವು ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇದನ್ನೂ ಓದಿ :ವಯಸ್ಸಾಯ್ತು, ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ: ರಾಜಕೀಯಕ್ಕೆ ಕೆ,ಎನ್​ ರಾಜಣ್ಣ ನಿವೃತ್ತಿ

ಇಂದು ದರ್ಶನ್​ ಪ್ರಕರಣದ ವಿಚಾರಣೆ ನಡೆಸಿದ 57ನೇ ಸಿಸಿಎಚ್​ ನ್ಯಾಯಾಲಯ ಎಲ್ಲಾ ಆರೋಪಿಗಳಿಗು ಸಮನ್ಸ್​ ಜಾರಿ ಮಾಡಿದೆ. ಎಲ್ಲಾ 17 ಜನರ ಆರೋಪಿಗಳು ವಿಚಾರಣೆಗೆ ಹಾಜರಾಗಿರುವುದನ್ನು ಖಚಿತಪಡಿಸಿಕೊಂಡ ನ್ಯಾಯಾಲಯ ಆರೋಪಿಗಳ ಮೇಲೆ ದಾಖಲಾಗಿರುವ ಚಾರ್ಜ್ಸ್​ಗಳ ವಿವರಣೆ ನೀಡಿದ್ದಾರೆ. ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 302 – ಕೊಲೆ, 364 – ಕಿಡ್ನಾಪ್ , ಹಾಗೂ 201 – ಸಾಕ್ಷಿನಾಶದ ಪ್ರಕರಣಗಳು ದಾಖಲಾಗಿದೆ. ಈ ಆರೋಪಗಳನ್ನು ಒಪ್ಪಿಕೊಳ್ಳುತ್ತೀರಾ ಎಂದು ಆರೋಪಿಗಳಿಗೆ ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ :ಮುನಿರತ್ನನ ಮತ್ತೊಂದು ಕರ್ಮಕಾಂಡ: ಅತ್ಯಾಚಾರವೆಸಗಿ, ಮೂತ್ರ ವಿಸರ್ಜನೆ ಮಾಡಿ ಕಿರುಕುಳ ನೀಡಿದ ರೌಡಿ ಶಾಸಕ..!

ನಂತರ ನ್ಯಾಯಲಯ ಮುಂದಿನ ವಿಚಾರಣೆಯನ್ನ ಜುಲೈ 10ಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದು. ಮುಂದಿನ ವಿಚಾರಣೆಯಿಂದ ಟ್ರಯಲ್​ ಆರಂಭಿಸೋದಾಗಿ ಸೂಚನೆ ನೀಡಿದೆ. ಪ್ರಕರಣದ ಆರೋಪಿ ದರ್ಶನ್​ ವಿಚಾರಣೆ ಮುಗಿಸಿ ನ್ಯಾಯಾಲಯದಿಂದ ಹೊರಟ್ಟಿದ್ದಾರೆ.

ಪವಿತ್ರಾಗೆ ಮೊಬೈಲ್​ ನಂಬರ್ ಕೊಟ್ಟ ದರ್ಶನ್​..!

ರೇಣುಕಸ್ವಾಮಿ ಕೊಲೆ ಪ್ರಕರಣದ ನಂತರ ನಟ ದರ್ಶನ್​, ಪ್ರೇಯಸಿ ಪವಿತ್ರಾ ಗೌಡಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಇಂದು ವಿಚಾರಣೆಗೆ ಹಾಜರಾದ ಸಂದರ್ಭದಲ್ಲಿ ಪವಿತ್ರಾ ಗೌಡ ದರ್ಶನ್​ ಜೊತೆ ಮಾತನಾಡಲು ಯತ್ನಿಸಿದ್ದಾರೆ, ಕೋರ್ಟ್​ ಹಾಲ್​ನಲ್ಲಿ ಪವಿತ್ರಾ, ದರ್ಶನ್​ ಕೈ ಹಿಡಿದು ಎಳೆದಿದ್ದು. ಮೊಬೈಲ್​ ನಂಬರ್​ ಕೊಡುವಂತೆ ದರ್ಶನ್​ ಬಳಿ ದುಂಬಾಲು ಬಿದ್ದದ್ದರು ಎಂದು ತಿಳಿದು ಬಂದಿದೆ. ಪವಿತ್ರಾ ಹಠಕ್ಕೆ ಬಗ್ಗಿದ ದರ್ಶನ್​ ಕೊನೆಗೂ ತಮ್ಮ ಮೊಬೈನ್​ ನಂಬರ್​ನ್ನು ಪವಿತ್ರಾಗೆ ಕೊಟ್ಟಿದ್ದಾರೆ.

Exit mobile version