Saturday, August 23, 2025
Google search engine
HomeUncategorizedಪಂಜಾಬ್​ಗೆ​ ತೆರಳಿದ್ದ ಧರ್ಮಸ್ಥಳ ಮೂಲದ ಏರೋಸ್ಪೇಸ್​ ಇಂಜಿನಿಯರ್​ ನಿಗೂಢವಾಗಿ ಸಾವು

ಪಂಜಾಬ್​ಗೆ​ ತೆರಳಿದ್ದ ಧರ್ಮಸ್ಥಳ ಮೂಲದ ಏರೋಸ್ಪೇಸ್​ ಇಂಜಿನಿಯರ್​ ನಿಗೂಢವಾಗಿ ಸಾವು

ಮಂಗಳೂರು: ಧರ್ಮಸ್ಥಳ ಮೂಲದ ಏರೋಸ್ಪೇಸ್​ ಇಂಜಿನಿಯರ್​ ಪಂಜಾಬ್​ನಲ್ಲಿ ನಿಗೂಡವಾಗಿ ಸಾವನ್ನಪ್ಪಿದ್ದು. ಕಾಲೇಜಿನಿಂದ ಸರ್ಟಿಫಿಕೇಟ್​ ತೆಗೆದುಕೊಂಡು ಬರಲು ತೆರಳಿದ್ದ ಯುವತಿ ನಿನ್ನೆ (ಮೇ.17) ನಿಗೂಡವಾಗಿ ಸಾವನ್ನಪ್ಪಿದ್ದಾರೆ. ಮೃತ ಯುವತಿಯನ್ನು ಅಕಾಂಕ್ಷಾ.ಎಸ್​. ನಾಯರ್​ ಎಂದು ಗುರುತಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ  ಮೂಲದ ಏರೋಸ್ಪೇಸ್​ ಉದ್ಯೋಗಿ ಯುವತಿ ಆಕಾಂಕ್ಷಾ ಎಸ್. ನಾಯರ್, ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದು. ಮಗಳ ಸಾವಿನ ಬಗ್ಗೆ ತಿಳಿಯುತ್ತಿದ್ದಂತೆ ಆಕಾಂಕ್ಷಾ ಪೋಷಕರಾದ ಸುರೇಂದ್ರ ಮತ್ತು ಸಿಂಧೂದೇವಿ ಪಂಜಾಬ್​ ತೆರಳಿದ್ದಾರೆ. ಜಲಂಧರ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಭಾರತವೇ ಕದನ ವಿರಾಮ ಪ್ರಸ್ತಾಪಿಸಿದೆ ಅಂತ ಪಾಕ್​ ಪ್ರಧಾನಿ ಹೇಳಿದ್ದಾರೆ: ಪ್ರಿಯಾಂಕ್​ ಖರ್ಗೆ

ಪಂಜಾಬ್​ನಲ್ಲಿ ಓದು, ದೆಹಲಿಯಲ್ಲಿ ಕೆಲಸ..!

ಯುವತಿ ಆಕಾಂಕ್ಷ ಪಂಜಾಬ್​ನ ಎಲ್​​.ಸಿ.ಯು ಪಗ್ವಾಡ ಕಾಲೇಜಿನಲ್ಲಿ ಏರೋಸ್ಪೇಸ್​ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಪಡೆದಿದ್ದಳು. ಕಳೆದ 6 ತಿಂಗಳಿಂದ ದೆಹಲಿಯಲ್ಲಿ ಏರೋಸ್ಪೇಸ್​ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದ ಆಕಾಂಕ್ಷ ಜಪಾನ್​ಗೇ ಹೋಗಲು ಕೂಡ ಪ್ಲಾನ್​ ರೂಪಿಸಿದ್ದಳು. ಇದಕ್ಕಾಗಿ ಸರ್ಟಿಫಿಕೇಟ್​ ಪಡೆಯಲು ಎಂದು ಪಂಜಾಬ್​ಗೆ ತೆರಳಿದ್ದಳು. ಸರ್ಟಿಫಿಕೇಟ್​ ಪಡೆದ ನಂತರ ತನ್ನ ತಂದೆ-ತಾಯಿಗೆ ಈ ಮಾಹಿತಿಯನ್ನು ಪೋನ್​ ಮಾಡಿ ತಿಳಿಸಿದ್ದಳು. ಆದರೆ ಇದೀಗ ಇದ್ದಕ್ಕಿದ್ದಂತೆ ಯುವತಿ ನಿಗೂಡವಾಗಿ ಸಾವನ್ನಪ್ಪಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments