Friday, August 29, 2025
HomeUncategorizedಕೌಟುಂಬಿಕ ಕಲಹ ನಾಲ್ವರು ಬಲಿ; ಸ್ವಂತ ತಂದೆ ಕೈಯಿಂದಲೇ ಕಣ್ಮುಚ್ಚಿದ ಹಸುಗೂಸು..!

ಕೌಟುಂಬಿಕ ಕಲಹ ನಾಲ್ವರು ಬಲಿ; ಸ್ವಂತ ತಂದೆ ಕೈಯಿಂದಲೇ ಕಣ್ಮುಚ್ಚಿದ ಹಸುಗೂಸು..!

ಕಲಬುರಗಿ : ಕೌಟುಂಬಿಕ ಕಲಹಕ್ಕೆ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಕಲಬುರಗಿಯಲ್ಲಿ ನಡೆದಿದ್ದು. ಸಂತೋಶ್​ ಎಂಬಾತ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿ, ನಂತರ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕಲಬುರಗಿ ನಗರದ, ಹೌಸಿಂಗ್ ಬೋರ್ಡ್ ಕಾಲೋನಿಯ ಮಾತೋಶ್ರೀ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ನಡೆದಿದ್ದು. ಮೃತ ಸಂತೋಶ್​ ಜೆಸ್ಕಾಂ ಇಲಾಖೆಯಲ್ಲಿ ಸೀನಿಯರ್​ ಅಸಿಸ್ಟೆಂಟ್​ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದ. ಆದರೆ ಕೌಟುಂಬಿಕ ಕಲಹಕ್ಕೆ ಬೇಸತ್ತು ಸಂತೋಷ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇದನ್ನೂ ಓದಿ :14 ಗಂಟೆಗಳ ಸುದೀರ್ಘ ಚರ್ಚೆ; ಮಧ್ಯರಾತ್ರಿ 2 ಗಂಟೆಗೆ ವಕ್ಫ್​ ಕಾಯ್ದೆಗೆ ಲೋಕಸಭೆ ಅಸ್ತು..!

ಸಂತೋಷ್​ ತನ್ನ ನಾಲ್ಕು ತಿಂಗಳ ಮಗು ಸೇರಿದಂತೆ, ಮಗ ಮನೀಷ್​ ಮತ್ತು ಪತ್ನಿ ಶೃತಿಯನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದು. ನಂತರ ಸುಧೀರ್ಘ ಆರು ಪುಟಗಳ ಡೆತ್​ನೋಟ್​ ಬರೆದು, ಪತ್ನಿಯ ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿ ನಂತರ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೌಟುಂಬಿಕ ಕಲಹಕ್ಕೆ ಬೇಸತ್ತು ಈ ಕೃತ್ಯ ಮಾಡಿದ್ದಾಗಿ ಡೆತ್​ನೋಟ್​ನಲ್ಲಿ ಉಲ್ಲೇಖಿಸಲಾಗಿದೆ.

ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಘಟನಾ ಸ್ಥಳಕ್ಕೆ ಕಲಬುರಗಿ ನಗರ ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ  ಸಂಸಾರ ಕಲಹಕ್ಕೆ ಏನು ಅರಿಯದ ಮಕ್ಕಳು ಬಲಿಯಾಗಿರುವುದು ನಿಜಕ್ಕೂ ದುಃಖಕರ ಸಂಗತಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments