Friday, August 29, 2025
HomeUncategorizedಕ್ರೇಂದ್ರ ಬಜೆಟ್​ ಮೇಲೆ ನಿರೀಕ್ಷೆ ಇಲ್ಲ, ನಮಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ : ಸಿದ್ದರಾಮಯ್ಯ

ಕ್ರೇಂದ್ರ ಬಜೆಟ್​ ಮೇಲೆ ನಿರೀಕ್ಷೆ ಇಲ್ಲ, ನಮಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ : ಸಿದ್ದರಾಮಯ್ಯ

ಮೈಸೂರು: ನಾಳೆ ಬಹುನಿರೀಕ್ಷಿತ ಕ್ರೇಂದ್ರ ಸರ್ಕಾರ ಬಜೆಟ್​ ಮಂಡನೆಯಾಗಲಿದ್ದು. ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ ಕೇಂದ್ರ ಸರ್ಕಾರದ ಬಜೆಟ್​ ಮೇಲೆ ನಮ್ಮ ನಿರೀಕ್ಷೆ ಏನು ಇಲ್ಲ. ಕೇಂದ್ರದಿಂದ ನಮಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಬಜೆಟ್​ನಲ್ಲಿ ಅಪ್ಪರ್​ ಭದ್ರಾ ಯೋಜೆನೆಗೆ ದುಡ್ಡು ಕೊಡುತ್ತೇನೆ ಎಂದು ಹೇಳಿದ್ದರು, ಆದರೆ ಇಲ್ಲಿಯವರೆದೂ ಒಂದು ರೂಪಾಯಿಯನ್ನು ಕೊಟ್ಟಿಲ್ಲ. ಹೀಗಾಗಿ ನಾವು ಈ ಕುರಿತು ಏನು ನಿರೀಕ್ಷೆ ಮಾಡಲ್ಲ. ನಮ್ಮ ರಾಜ್ಯ ಕೇಂದ್ರಕ್ಕೆ ನಾಲ್ಕು ಲಕ್ಷ ಕೋಟಿ ತೆರಿಗೆ ನೀಡುತ್ತೇವೆ. ಆದರೆ ಅವರು ನಮಗೆ ಕೇವಲ 68 ಸಾವಿರ ಕೋಟಿ ವಾಪಾಸ್​ ಕೊಡುತ್ತಾರೆ. ನಬಾರ್ಡ್​ ನೀಡುತ್ತಿದ್ದ ಸಾಲದ ಮೊತ್ತವನ್ನು ಕಡಿತ ಮಾಡಿದ್ದಾರೆ. ಹಾಗಾಗಿ ನಾವು ಕೇಂದ್ರದ ಬಜೆಟ್​ನಿಂದ ಏನು ನಿರೀಕ್ಷೆ ಮಾಡಲ್ಲ ಎಂದು ಹೇಳಿದರು.

ಇದನ್ನೂ ಓದಿ:ಮೃತ ಮಂಜಮ್ಮ ಕುಟುಂಬಕ್ಕೆ ಧನ ಸಹಾಯ ಮಾಡಿದ ಡ್ರೋನ್​ ಪ್ರತಾಪ್​ !

ವಿಪರೀತ ಬಡ್ಡಿ ವಸೂಲಿ ಮಾಡುವವರ ಮೇಲೆ ಕ್ರಮ ಆಗುತ್ತದೆ !

ರಾಜ್ಯದಲ್ಲಿ ಮೈಕ್ರೋಫೈನಾನ್ಸ್​ ಕಿರುಕುಳದಿಂದ ಬೇಸತ್ತು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಚಾರದ ಕುರಿತು ಮಾತನಾಡಿದ ಸಿದ್ದರಾಮಯ್ಯ ‘ಜನ ಎಲ್ಲಿ ಸಾಲ ಸಿಗುತ್ತೆ ಅಲ್ಲಿಗೆ ಹೋಗುತ್ತಿದ್ದಾರೆ. ಕೆಲವರು ಹೆಚ್ಚು ಬಡ್ಡಿಗೆ ಸಾಲ ನೀಡುತ್ತದ್ದಾರೆ. ಕೆಲ ಮಾಹಿತಿ ಪ್ರಕಾರ ಗೂಂಡಾಗಳನ್ನು ಬಳಸಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸುಗ್ರೀವಾಜ್ನೆ ಹೊರಡಿಸುತ್ತೇವೆ. ನಂತರ ಇವುಗಳಿಗೆ ಕಡಿವಾಣ ಬೀಳಲಿದೆ ಎಂದು ಹೇಳಿದರು.

ಕೆಲವು ಕಡೆ 28, 29, 30% ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಬೇಸತ್ತು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.  ಯಾರು ವೀಪರೀತವಾಗಿ ಬಡ್ಡಿ ವಸೂಲಿ ಮಾಡುತ್ತಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಜನರು ಆತ್ಮಹತ್ಯೆ ಮಾಡಿಕೊಳ್ಳಬಾರದು ಜನರ ಪರವಾಗಿ ಸರ್ಕಾರ ಇದೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments