Monday, August 25, 2025
Google search engine
HomeUncategorizedಸುಧಾಕರ್​ ರಾಜ್ಯಾಧ್ಯಕ್ಷ ಆಗಿ, ಸಿಎಂ ಆಗುವ ಲೆಕ್ಕಾಚಾರ ಹಾಕಿಕೊಂಡಿರಬಹುದು : ಪ್ರೀತಂಗೌಡ

ಸುಧಾಕರ್​ ರಾಜ್ಯಾಧ್ಯಕ್ಷ ಆಗಿ, ಸಿಎಂ ಆಗುವ ಲೆಕ್ಕಾಚಾರ ಹಾಕಿಕೊಂಡಿರಬಹುದು : ಪ್ರೀತಂಗೌಡ

ಬೆಂಗಳೂರು : ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ಆಯ್ಕೆಗೆ ಸುಧಾಕರ್ ತೀವ್ರ ವಿರೋಧ ಹಿನ್ನೆಲೆ ಹಾಸನ ಮಾಜಿ ಶಾಸಕ ಪ್ರೀತಂ ಗೌಡ ಹೇಳಿಕೆ ನೀಡಿದ್ದು. ಸುಧಾಕರ್ ಹೇಳಿಕೆಗೆ ಟಾಂಗ್​ ನೀಡಿದ್ದಾರೆ.

ಸುಧಾಕರ್​​ ನಾಲ್ಕೈದು ವರ್ಷಗಳ ಹಿಂದೆ ಪಕ್ಷ ಸೇರಿದ್ದಾರೆ. ಅವರಿಗೆ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಯಾವ ರೀತಿ ನಡೆಯುತ್ತದೆ ಅಂತ ತಿಳಿದಿಲ್ಲ. ಬಿಜೆಪಿ ಕಾರ್ಯಕರ್ತರಿಗೆ ಇದರ ಬಗ್ಗೆ ಸರಿಯಾಗಿ ತಿಳಿದಿದೆ. ಸುಧಾಕರ್​ ಅವರು ಚಿಕ್ಕಬಳ್ಳಾಪುರ ಸಂಸದರು ಆಗಿದ್ದಾರೆ ಅಂತ ಅವರಿಗೆ ಚಿಕ್ಕಬಳ್ಳಾಪುರ ಬರೆದುಕೊಟ್ಟಿಲ್ಲ. ಅವರು ಪಕ್ಷಕ್ಕೆ ಬಂದು ಐದು ವರ್ಷ ಅಷ್ಟೇ ಆಗಿದೆ. ಈಗಲೇ ಅವರು ಇಡೀ ಪಕ್ಷ ತಾವು ಹೇಳಿದಂತೆ ಕೇಳಬೇಕು ಅನ್ನೋ ಮನಸ್ಥಿತಿಯಲ್ಲಿದ್ದಾರೆ. ಅದರಿಂದ  ಸುಧಾಕರ್ ಹೊರಗೆ ಬರಬೇಕು ಎಂದು ಹೇಳಿದರು.

ಇದನ್ನೂ ಓದಿ :ಬುರ್ಖಾದೊಳಗೆ ಗಾಂಜ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಖತರ್ನಾಕ್​​ ಮಹಿಳೆ ಅಂದರ್​ !

ಮುಂದುವರಿದು ಮಾತನಾಡಿದ ಪ್ರೀತಂಗೌಡ ‘ಸುಧಾಕರ್​ಗೆ ಈ ಐದು ವರ್ಷದಲ್ಲಿ ಮೂರು ಸಲ ಬಿ ಫಾರಂ ಕೊಟ್ಟಿದೆ, ನಾಲ್ಕು ವರ್ಷ ಮಂತ್ರಿ ಮಾಡಲಾಗಿದೆ. ಅವರು ಎಲ್ಲಾವನ್ನು ಫಾಸ್ಟ್​ ಆಗಿ ಆಗಬೇಕು ಎಂದು ಬಯಸುತ್ತಿದ್ದಾರೆ. ಅವ್ರು ಶಾಸಕ ಆಗಿ, ಮಂತ್ರಿ ಆಗಿ, ಸಂಸದರಾಗಿ, ರಾಜ್ಯಧ್ಯಕ್ಷ ಆಗಿ, ಸಿಎಂ ಆಗಬೇಕು ಎಂಬ ಲೆಕ್ಕಾಚಾರ ಹಾಕಿಕೊಂಡಿರಬೇಕು. ಅದರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಸುಧಾಕರ್​ ವಿಜಯೇಂದ್ರ ಸುಧಾಕರ್​ ಶಕ್ತಿಯ ಬಗ್ಗೆ ಮಾತನಾಡೋದು ಬೇಡ, ಅವರು ತಮ್ಮ ಮಾತಿನ ರೀತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments