Monday, August 25, 2025
Google search engine
HomeUncategorizedಅಯ್ಯಾ ಎಂದರೇ ಸ್ವರ್ಗ, ಎಲವೋ ಎಂದರೆ ನರಕ : ಸಿ.ಎಂ ಸಿದ್ದರಾಮಯ್ಯ !

ಅಯ್ಯಾ ಎಂದರೇ ಸ್ವರ್ಗ, ಎಲವೋ ಎಂದರೆ ನರಕ : ಸಿ.ಎಂ ಸಿದ್ದರಾಮಯ್ಯ !

ಬೆಂಗಳೂರು : ಗಂಗೆಯಲ್ಲಿ ಸ್ನಾನ ಮಾಡಿದ ತಕ್ಷಣ ಹೊಟ್ಟೆ ತುಂಬಲ್ಲ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರವಾಗಿ ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ ಇದರ ಕುರಿತು ಖರ್ಗೆ ಬಳಿಯಲ್ಲಿ ಕೇಳಿ, ಕುಂಭಮೇಳದಲ್ಲಿ ಸ್ನಾನ ಮಾಡೋದು, ಗಂಗೆಯಲ್ಲಿ ಸ್ನಾನ ಮಾಡಿದ್ರೆ ಪಾಪ ಪರಿಹಾರ ಹಾಗುತ್ತೆ ಎಂಬ ನಂಬಿಕೆ ಇದೆ. ಆದರೆ ನಾವೆಲ್ಲರೂ ಬಸವಣ್ಣನ ಅನುಯಾಯಿಗಳು. ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂಬ ತತ್ವದ ಮೇಲೆ ನನಗೆ ನಂಬಿಕೆ ಇದೆ ಎಂದು ಹೇಳಿದರು.

ಇಡಿ ನೋಟಿಸ್​ ವಿಚಾರವಾಗಿ ಸಿಎಂ ಮಾತು !

ಸಿದ್ದರಾಮಯ್ಯರ ಧರ್ಮಪತ್ನಿಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್​ ನೀಡಿದ ವಿಚಾರದ ಕುರಿತಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ ಇಡಿ ನೀಡಿರುವ ನೋಟಿಸ್​ಗೆ ಕೋರ್ಟ್​ ಸ್ಟೇ ನೀಡಿದೆ. ತನಿಖೆಗೆ ಅವಸರ ಯಾಕೆ ಎಂದು ನ್ಯಾಯಾಧೀಶರು ಕೇಳಿದ್ದಾರಂತೆ. ಸಿಬಿಐ ತನಿಖೆ ಮಾಡಬೇಕೋ ಅಥವಾ ಬೇಡ್ವೋ ಎಂಬ ಚರ್ಚೆ ನಡೆಯುತ್ತಿದೆ. ಆರ್ಗ್ಯುಮೆಂಟ್ ಹಂತದಲ್ಲಿ ತೀರ್ಪು ಕಾಯ್ದಿರಿಸಲಾಗಿದೆ ಎಂದು ಉತ್ತರಿಸಿದರು.

ಇದನ್ನೂ ಓದಿ: ಎಲ್ಲಾನು ಫ್ರೀಯಾಗಿ ಕೊಡೋದಕ್ಕೆ ಹಾಗುತ್ತಾ : ಡಿ.ಕೆ ಶಿವಕುಮಾರ್​ !

ಮುಂದುವರಿದು ಮಾತನಾಡಿದ ಸಿಎಂ ‘ ಇಡಿ ನೀಡಿರುವ ನೋಟಿಸ್​ ರಾಜಕೀಯ ಪ್ರೇರಿತವಾಗಿದೆ. ಇಡೀ ಮೂಡಾ ಪ್ರಕರಣವೇ ರಾಜಕೀಯ ಪ್ರೇರಿತಾ ಪ್ರಕರಣವಾಗಿದೆ. ಸಿಬಿಐಗೆ ಈ ಪ್ರಕರಣವನ್ನು ತನಿಖೆಗೆ ಕೊಡೊ ಬಗ್ಗೆ ನನಗೆ ಯಾವುದೇ ಆತಂಕ ಇಲ್ಲ. ನನಗೆ ನ್ಯಾಯ ಸಿಗುತ್ತೆ ಎಂಬ ಭರವಸೆ ಇದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪರಿಸಿದರು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments