Wednesday, September 3, 2025
HomeUncategorizedರಾಜಧಾನಿಯಲ್ಲಿ ಮತ್ತೊಂದು ಅಗ್ನಿ ದುರಂತ : ಗಾರ್ಮೆಂಟ್ಸ್​ ಒಳಗೆ ಕಾರ್ಮಿಕರಿರುವ ಶಂಕೆ

ರಾಜಧಾನಿಯಲ್ಲಿ ಮತ್ತೊಂದು ಅಗ್ನಿ ದುರಂತ : ಗಾರ್ಮೆಂಟ್ಸ್​ ಒಳಗೆ ಕಾರ್ಮಿಕರಿರುವ ಶಂಕೆ

ಆನೇಕಲ್ : ಹೆಬ್ಬಗೋಡಿ ಕೈಗಾರಿಕಾ ಪ್ರದೇಶದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು. ನಾಲ್ಕು ಗಾರ್ಮೆಂಟ್ಸ್​ಗಳನ್ನು ಒಳಗೊಂಡಿರುವ ಕಾರ್ಖಾನೆ ಕಾಂಪೌಂಡ್​ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಕಾರ್ಖಾನೆ ಒಳಗೆ ಕಾರ್ಮಿಕರು ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ.

ಸ್ವೀಯಿಂಗ್​ ಸಿಸ್ಟಮ್​ ಪ್ರೈವೇಟ್​ ಲಿಮಿಟೆಡ್​, ಓರಿಯನ್ಸ್​ ಅಪೇರೆಲ್ಸ್​ ಮತ್ತು IIGM ಕಂಪನಿಗಳಿಗೆ ಸೇರಿದ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು. ಬೆಂಕಿಯ ಕೆನ್ನಾಲಿಗೆಗೆ ಇಡೀ ಗೋದಾಮು ಧಗಧಗಿಸಿದೆ. ಗಾರ್ಮೇಂಟ್ಸ್​ ಪಕ್ಕದಲ್ಲೆ ಸಾಯಿ ವಿಶ್ರಾಮ್​ ಹೊಟೇಲ್​ ಬೆಂಕಿ ಕೆನ್ನಾಲಿಗೆ ಚಾಚುತ್ತಿದ್ದು. ಆಕಾಶದೆತ್ತರಕ್ಕೆ ಭಾರೀ ಗಾತ್ರದ ಹೊಗೆ ಆವರಿಸಿದೆ.

ಇದನ್ನೂ ಓದಿ :ಮೆಟ್ರೋದಲ್ಲಿ ಮಹಿಳೆಯರ ಪೋಟೋ ತೆಗೆಯುತ್ತಿದ್ದ ಕಾಮುಕ ಲಾಕ್​ : 5 ಸಾವಿರ ದಂಡ ವಿಧಿಸಿದ BMRCL

ಬಟ್ಟೆ, ಲೆದರ್​, ಕೆಮಿಕಲ್​ಗಳನ್ನು ಈ ಕಾರ್ಖಾನೆಯಲ್ಲಿ ಸಂಗ್ರಹಿಸಿದ್ದು. ಶಾರ್ಕ್​ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ. ಬೆಂಕಿಯ ಕೆನ್ನಾಲಿಗೆಗೆ ಕಾರ್ಖಾನೆಯಲ್ಲಿರುವ ಯಂತ್ರಗಳು ಕೂಡ ಸ್ಪೋಟಗೊಳ್ಳುತ್ತಿದ್ದು ಇದರಿಂದ ಬೆಂಕಿ ವೇಗವಾಗಿ ಆವರಿಸಿದೆ.

ಸ್ಥಳಕ್ಕೆ ಎಲೆಕ್ಟ್ರಾನಿಕ್​ ಸಿಟಿ ಪೊಲೀಸರು ಮತ್ತು ಅನೇಕಲ್​ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಕಾರ್ಖನೆ ಒಳಗೆ ಕಾರ್ಮಿಕರು ಸಿಲುಕಿರುವ ಶಂಕೆ ಇದ್ದು. ಇದರ ಬಗ್ಗೆ ಇನ್ನಷ್ಟೆ ಮಾಹಿತಿಗಳು ದೊರೆಯಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments