ಪ್ರಿಯಕರನಿಗೆ ಚಾಕು ಇರಿದ ಪ್ರೇಯಸಿ : ಆಸ್ಪತ್ರೆ ಪಾಲಾದ ಯುವಕ !

ಹಾಸನ: ಪ್ರೇಯಸಿಯೊಬ್ಬಳು ಪ್ರೀತಿಸುತ್ತಿದ್ದ ಪ್ರೇಮಿಗೆ ಚಾಕುವಿನಿಂದ ಇರಿದಿರುವ ಘಟನೆ ಹಾಸನದಲ್ಲಿ ನಡೆದಿದ್ದು. ಹೊಸವರ್ಷ ಸಂಭ್ರಮದಲ್ಲಿದ್ದ ಪ್ರಿಯಕರ ಐಸಿಯು ಪಾಲಾಗಿದ್ದಾನೆ ಎಂದು ಮಾಹಿತಿ ದೊರೆತಿದೆ. ಗಾಯಾಳು ಪ್ರಿಯಕರನನ್ನು ಮನುಕುಮಾರ್​ ಎಂದು ಗುರುತಿಸಿದ್ದು. ಯುವತಿಯನ್ನು ಭವಾನಿ ಎಂದು ಗುರುತಿಸಲಾಗಿದೆ.

ಹಾಸನ ತಾಲ್ಲೂಕಿನ, ಎ.ಗುಡುಗನಹಳ್ಳಿ ಗ್ರಾಮದ ಮನುಕುಮಾರ್ ಹಾಗೂ ಭವಾನಿ ಜೊತೆಯಲ್ಲಿಯೆ ವಿಧ್ಯಾಬ್ಯಾಸ ಮಾಡಿದ್ದರು. ಈ ವೇಳೆ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಆದರೆ ಕೆಲದಿನಗಳಿಂದ ಇಬ್ಬರು ಪರಸ್ಪರ ದೂರವಾಗಿದ್ದರು.

ಇದನ್ನೂ ಓಧಿ : KSRTC ಬಸ್​ ಬ್ರೇಕ್​ಫೇಲ್​ : ಹೊಸವರ್ಷದ ಮೊದಲ ದಿನವೇ ತಪ್ಪಿತು ಭಾರಿ ದುರಂತ !

ನಿನ್ನೆ ಹಾಸನ ನಗರದ ಬಿ.ಎಂ. ರಸ್ತೆಯಲ್ಲಿರುವ ಖಾಸಗಿ ಹೋಟೆಲ್​ನಲ್ಲಿ ಮನುಕುಮಾರ್​ ಮತ್ತು ಸ್ನೇಹಿತರು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದರು. ಈ ವೇಳೆ ಭವಾನಿ ತನ್ನ ಪ್ರೇಮಿಗೆ ಅನೇಕ ಭಾರಿ ಕರೆ ಮಾಡಿದ್ದಾಳೆ. ಆದರೆ ಮನು ಕರೆ ಸ್ವೀಕಾರ ಮಾಡದೆ ಇದ್ದ ಕಾರಣದಿಂದ ಹೋಟೆಲ್​ ಬಳಿ ಬಂದ ಭವಾನಿ ಹೋಟೆಲ್​ ಒಳಗೆ ಪ್ರವೇಶ ಮಾಡುವ ವೇಳೆ ಮನುಕುಮಾರ್ ಹೋಟೆಲ್​ ಗೇಟ್​ನಲ್ಲಿ ಯುವತಿಗೆ ಎದುರು ಬಂದಿದ್ದಾನೆ. ಈ ವೇಳೆ ಅಲ್ಲೆ ಇದ್ದ ಮನುಕುಮಾರ್​ ಸ್ನೇಹಿತರು ಜಗಳವನ್ನು ಬಿಡಿಸಲು ಯತ್ನಿಸಿದ್ದಾನೆ. ಈ ವೇಳೆ ಏಕಾಏಕಿ ಭವಾನಿ ಚಾಕು ತೆಗೆದುಕೊಂಡು ಮನುಗೆ ಇರಿದಿದ್ದಾಳೆ.

ಗಾಯಗೊಂಡ ಮನುಕುಮಾರ್​ನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಮನುಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಕೆ,ಆರ್​.ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ದೊರೆತಿದೆ

RELATED ARTICLES

Related Articles

TRENDING ARTICLES