Site icon PowerTV

ರಾತ್ರಿ ಸ್ಥಾಪಿಸಿದ ಪುನೀತ್​​ ಪುತ್ತಳಿಯನ್ನು ಬೆಳಗಾಗುವುದರೊಳಗೆ ತೆರವುಗೊಳಿಸಿದ ಪೊಲೀಸರು !

ತುಮಕೂರು : ಅಪ್ಪು ಪುತ್ತಳಿಯನ್ನು ತೆರವುಗೊಳಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದ್ದು. ಡಿಸೆಂಬರ್​ 18ರಂದು ಕನ್ನಡ ರಕ್ಷಣಾ ವೇದಿಕೆಯ ಅಪ್ಪು ಸೇನೆಯಿಂದ ಸ್ಥಾಪಿಸಿದ್ದ ಅಪ್ಪು ಪುತ್ತಳಿಯನ್ನು ತೆರವುಗೊಳಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

ತಿಪಟೂರಿನ ಹೊನ್ನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಡಿಸೆಂಬರ್ 18 ರಂದು ಕನ್ನಡ ರಕ್ಷಣಾ ವೇದಿಕೆಯ ಅಪ್ಪು ಸೇನೆವತಿಯಿಂದ ಪುನೀತ್​ ರಾಜ್​ ಕುಮಾರ್ ಪುತ್ತಳಿಯನ್ನು ಸ್ಥಾಪಿಸಲು ಅನುಮತಿ ಕೋರಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಗ್ರಾಮ ಪಂಚಾಯತಿ ಅನುಮತಿ ನೀಡದ ಕಾರಣ  ಹೊನ್ನವಳ್ಳಿಯಲ್ಲಿ ಗುರುವಾರ ರಾತ್ರಿಯೇ ಪುನೀತ್​ ಪುತ್ತಳಿಯನ್ನು ಸ್ಥಾಪಿಸಿದ್ದರು.

ಇದನ್ನೂ ಓದಿ : ಭೀಕರ ರಸ್ತೆ ಅಪಘಾತ : ಕಂಟೈನರ್​ ಕೆಳಗೆ ಅಪ್ಪಚ್ಚಿಯಾದ ಕಾರು, ನಾಲ್ವರು ಸ್ಥಳದಲ್ಲೆ ಸಾ*ವು !

ಆದರೆ ಶುಕ್ರವಾರ ಬೆಳಗಿನ ಜಾವ ಪುತ್ತಳಿಗೆ ಪೂಜೆ ಸಲ್ಲಿಸಬೇಕು ಎನ್ನುವಷ್ಟರಲ್ಲಿ ಪೊಲೀಸರು ಪುನೀತ್​ ರಾಜ್​ಕುಮಾರ್​ ಅವರ ಪುತ್ತಳಿಯನ್ನು ತೆರವು ಮಾಡಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದ್ದು. ಪೊಲೀಸರು ಪುತ್ತಳಿಯನ್ನು ಗ್ರಾಮ ಪಂಚಾಯತಿಗೆ ಹಸ್ತಾಂತರ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು. ಹೊನ್ನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

Exit mobile version