Site icon PowerTV

ಹೆಣ್ಣಾನೆ ಮೃತದೇಹ ಪತ್ತೆ; ಆಂಥಾಕ್ಸ್ ಕಾಯಿಲೆಯಿಂದ ಸಾವನ್ನಪ್ಪಿರುವ ಶಂಕೆ

ಚಾಮರಾಜನಗರ: ಹೆಣ್ಣಾನೆ ಮೃತ ದೇಹ (30) ಪತ್ತೆಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕುಂದಕೆರೆ ವಲಯದಲ್ಲಿ ನಡೆದಿದೆ.

ಮೇಲೋಟಕ್ಕೆ ಆಂಥಾಕ್ಸ್ ಕಾಯಿಲೆಯಿಂದ ಹೆಣ್ಣಾನೆ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಬಾಚಹಳ್ಳಿ ಗ್ರಾಮದ ಸರ್ವೇ ನಂ-516ರ ಪ್ರದೇಶದಲ್ಲಿ ಹೆಣ್ಣಾನೆ ಮೃತದೇಹ ಪತ್ತೆಯಾಗಿದ್ದು, ಆನೆಯು ಆಂಥಾಕ್ಸ್ (Anthrax) ಕಾಯಿಲೆಯಿಂದ ಮೃತ ಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಂಕೆಯಾಗಿದೆ.

ಅರಣ್ಯ ಇಲಾಖೆ ಗಸ್ತು ತಿರುಗುತಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಹಾಗೂ ವಲಯ ಅರಣ್ಯಾಧಿಕಾರಿ ಮಲ್ಲೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸದ್ಯ ಮೃತ ಆನೆಯ ಅಂಗಾಂಗಗಳ ಮಾದರಿಗಳನ್ನು ಸಂಗ್ರಹಿಸಿ, ಬೆಂಗಳೂರಿನ ವಿಜ್ಞಾನ ಪ್ರಯೋಗ ಶಾಲೆ ರವಾನೆ ಮಾಡಲಾಗಿದೆ.

Exit mobile version