Site icon PowerTV

ಲಾರಿಗೆ ಹೈಟೆನ್ಷನ್ ವೈರ್ ತಗುಲಿ ಚಾಲಕ ದಾರುಣ ಸಾವು

ರಾಯಚೂರು: ಚಲಿಸುತ್ತಿದ್ದ ಲಾರಿಗೆ ಹೈಟೆನ್ಷನ್ ವೈರ್ ತಗುಲಿ ಚಾಲಕ ದಾರುಣವಾಗಿ ಮೃತಪಟ್ಟಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಯಡಿವಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಅಜಯ್ ಕುಮಾರ್ (35) ಮೃತ ದುರ್ದೈವಿ.

ಜಾರ್ಖಂಡ್ ಮೂಲದ ಚಾಲಕ ಅಜಯ್ ಕುಮಾರ್ ಲಾರಿಯಲ್ಲಿ ಹಿಟಾಚಿಯನ್ನು ಸ್ಥಳಾಂತರ ಮಾಡುತ್ತಿದ್ದರು. ಚಲಿಸುತ್ತಿದ್ದ ಲಾರಿಗೆ ಸುಮಾರು 11 ಕೆವಿಯ ಹೈಟೆನ್ಷನ್‌ ವೈರ್ ತಗುಲಿ ಶಾರ್ಟ್ ಸರ್ಕ್ಯೂಟ್ ಆಗಿದೆ. ಇದರಿಂದ ಲಾರಿಯು ಏಕಾಏಕಿ ಬೆಂಕಿಯಿಂದ ಹೊತ್ತಿ ಉರಿದಿದೆ.

ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Exit mobile version